ಗುರುಗ್ರಾಮ್ : ಪುಲ್ವಾಮ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರ ಹತ್ಯೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ದಾಳಿಯ ಬಗ್ಗೆ ಯಾವಾಗ, ಎಲ್ಲಿ ಮತ್ತು ಹೇಗೆ ಪ್ರತಿಕ್ರಿಯೆಯನ್ನು ನೀಡಬೇಕು ಎಂಬುದನ್ನು ರಾಷ್ಟ್ರೀಯ ನಾಯಕತ್ವ ನಿರ್ಧರಿಸುತ್ತದೆ ಎಂದಿದ್ದಾರೆ.
ಗುರುಗ್ರಾಮದಲ್ಲಿ ನಡೆದ ಸಿಆರ್ಪಿಎಫ್ 80ನೇ ವಾರ್ಷಿಕ ಪರೇಡ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ನಡೆದ 40 ಯೋಧರ ಹತ್ಯೆಯನ್ನು ನಾವು ಎಂದಿಗೂ ಮರೆಯೋದಿಲ್ಲ, ಈ ದೇಶ ಎಂದಿಗೂ ಮರೆಯೋದಿಲ್ಲ’ ಎಂದಿದ್ದಾರೆ.
‘ನಾವು ಏನು ಮಾಡಬೇಕು, ಯಾವ ಮಾರ್ಗವನ್ನು ಅನುಸರಿಸಬೇಕು, ಯಾವಾಗ ಯಾವ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಮತ್ತು ಎಲ್ಲಾ ವಿಧದ ಸವಾಲನ್ನು ಸ್ವೀಕರಿಸಲು ನಮ್ಮ ದೇಶದ ನಾಯಕತ್ವ ಸಮರ್ಥವಾಗಿದೆ’ ಎಂದಿದ್ದಾರೆ.
ಏನು ಅಗತ್ಯವಿದೆಯೋ ಅದನ್ನು ಮಾಡಲು ನಮ್ಮ ದೇಶದ ಸಮರ್ಥವಾಗಿದೆ, ಭಯೋತ್ಪಾದಕರ ವಿರುದ್ಧವೇ ಇರಲಿ ಅಥವಾ ಅವರ ಬೆಂಬಲಿಗರ ವಿರುದ್ಧವೇ ಇರಲಿ, ಕ್ರಮ ಜರುಗಿಸಲು ನಾವು ಸಮರ್ಥರಿದ್ದೇವೆ. ಅವರ ವಿರುದ್ಧ ನಾವು ಹೋರಾಡಲಿದ್ದೇವೆ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಮರ್ಥರಿದ್ದೇವೆ ಎಂದಿದ್ದಾರೆ.
‘ಪಡೆಗಳನ್ನು ಕಳುಹಿಸಿಕೊಡುವ ಬಗ್ಗೆ, ಎಲ್ಲಿಗೆ ಯಾವ ಪಡೆಗಳನ್ನು ಎಷ್ಟು ಪ್ರಮಾಣದಲ್ಲಿ ಕಳುಹಿಸಿಕೊಡಬೇಕು ಎಂಬ ಬಗ್ಗೆ ಮಾತುಕತೆಗಳು, ಚರ್ಚೆಗಳು ಬಂದಾಗಲೆಲ್ಲಾ ನಾವು ಮೊದಲಿಗೆ ಸಿಆರ್ಪಿಎಫ್ನ್ನು ಕಳುಹಿಸಿಕೊಡುತ್ತೇವೆ. ಅವರಲ್ಲಿ ಹೆಚ್ಚಿನ ಸಾಮರ್ಥ್ಯವಿದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.