ನವದೆಹಲಿ: ನರೇಂದ್ರ ಮೋದಿ ಸರ್ಕಾರವು 390 ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಶೇ. 87ರಷ್ಟು ಕಡಿಮೆಗೊಳಿಸಿದೆ. ಈ ದರ ನಿರ್ಬಂಧದಿಂದ ದೇಶದ ಒಟ್ಟು ಕ್ಯಾನ್ಸರ್ ರೋಗಿಗಳ ವಾರ್ಷಿಕ ಉಳಿತಾಯ ಸುಮಾರು 800 ಕೋಟಿಯಷ್ಟಾಗಲಿದೆ. ದರ ನಿಯಂತ್ರಕ ಸಂಸ್ಥೆ ‘ನ್ಯಾಷನಲ್ ಫಾರ್ಮಸ್ಯುಟಿಕಲ್ ಫ್ರೈಸಿಂಗ್ ಅಥಾರಿಟಿ(ಎನ್ಪಿಪಿಎ)’ ಸುಮಾರು 1 ಸಾವಿರ ಔಷಧಿಗಳನ್ನು ದರ ನಿಯಂತ್ರಕ ಪಟ್ಟಿಯಲ್ಲಿರಿಸಿದೆ.
ಕ್ಯಾನ್ಸರ್ ಔಷಧಿಗಳ ದರವನ್ನು ಕುಗ್ಗಿಸಿದ್ದರಿಂದ ದೇಶದ ಸುಮಾರು 22 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ, ಆರೋಗ್ಯಕ್ಕಾಗಿ ಅವರು ವ್ಯಯಿಸುವ ಹಣ ಕಡಿಮೆಯಾಗಲಿದೆ.
ಮೋದಿ ಆರಂಭಿಸಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಯೋಜನೆ ದೇಶದ ಬಡಜನತೆಯ ಸುಮಾರು 1 ಸಾವಿರ ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿದೆ, ಔಷಧಿಗಳನ್ನು ಶೇ.50 ರಿಂದ 90ರಷ್ಟು ಕಡಿಮೆ ದರಕ್ಕೆ ನೀಡುವ 5,000 ಜನೌಷಧಿ ಕೇಂದ್ರಗಳು ನಮ್ಮ ದೇಶದಲ್ಲಿವೆ.
ರಾಷ್ಟ್ರೀಯ ಆರೋಗ್ಯ ನಿಯಮದ ಪ್ರಕಾರ, ಸುಮಾರು 63 ಮಿಲಿಯನ್ ಜನರು ಆರೋಗ್ಯದ ಕಾರಣಕ್ಕಾಗಿಯೇ ಬಡವರಾಗುತ್ತಿದ್ದಾರೆ. ಬಹುತೇಕ ಜನರಿಗೆ ಆರೋಗ್ಯ ರಕ್ಷಣೆ ಇಲ್ಲದೇ ಇರುವುದೇ ಇದಕ್ಕೆ ಕಾರಣವಾಗಿದೆ. ಔಷಧಿ ಚಿಕಿತ್ಸೆಗಳಿಗಾಗಿ ತಮ್ಮ ಆಭರಣಗಳನ್ನು ಮಾರಾಟ ಮಾಡಬೇಕಾಗುತ್ತದೆ, ಸಾಲಗಳನ್ನು ಮಾಡಬೇಕಾಗುತ್ತದೆ. ದುಡಿಮೆ ಕುಂಠಿತವಾಗುತ್ತದೆ. ಇದರಿಂದ ಜನರು ಬಡತನವನ್ನು ಕಾಣಬೇಕಾಗುತ್ತದೆ.
ಆದರೆ ಮೋದಿ ಸರ್ಕಾರವು ಆಯುಷ್ಮಾನ್ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಬಡವರು ಈ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಮೂಲಕ ವಾರ್ಷಿಕ 5 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ವಿಮೆಯನ್ನು ಪಡೆದುಕೊಳ್ಳಬಹುದಾಗಿದೆ. 50 ಕೋಟಿ ಜನರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ಯೋಜನೆಯಡಿ 1,50,000 ವೆಲ್ನೆಸ್ಸೆಂಟರ್ಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಇದರಿಂದ ಜನರಿಗೆ ಆರೋಗ್ಯ ಸೇವೆ ಇನ್ನಷ್ಟು ಹತ್ತಿರ ಮತ್ತು ಸುಲಭವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.