ಬೆಂಗಳೂರು: 5 ದಿನಗಳ ಏರೋ ಶೋಗೆ ಬೆಂಗಳೂರಿನ ಯಲಹಂಕದಲ್ಲಿ ಬುಧವಾರ ಚಾಲನೆಯನ್ನು ನೀಡಲಾಗಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದಕ್ಕೆ ಚಾಲನೆಯನ್ನು ನೀಡಿದರು.
ಐದು ದಿನಗಳ ಪ್ರದರ್ಶನಗಳ ಪೈಕಿ ಮೊದಲ ದಿನವನ್ನು ಬ್ಯುಸಿನನ್ಸ್ ಡೇ, ಫೆ.21ನ್ನು ನವೋದ್ಯಮ ದಿನ, ಫೆ.22ನ್ನು ತಂತ್ರಜ್ಞಾನ ದಿನ, ಫೆ.23ರಂದು ಮಹಿಳಾ ದಿನ, ಫೆ.24ನ್ನು ಸಮಾರೋಪ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ಮಂಗಳವಾರ ವೈಮಾನಿಕ ತಾಲೀಮು ನಡೆಸುತ್ತಿದ್ದ ವೇಳೆ, ವಿಮಾನಗಳು ಢಿಕ್ಕಿ ಹೊಡೆದು ಸಾವನ್ನಪ್ಪಿದ್ದ ಸೂರ್ಯ ಕಿರಣ್ ಕಮಾಂಡರ್ ಪೈಲೆಟ್ ಸಾಹಿಲ್ ಗಾಂಧಿ ಅವರ ಗೌರವಾರ್ಥ, ಯುದ್ಧ ವಿಮಾನ ರಫೆಲ್ ನಿಗದಿತ ವೇಗಕ್ಕಿಂತ ನಿಧಾನಗತಿಯಲ್ಲಿ ಹಾರಿತು. ಅಪಘಾತದ ಹಿನ್ನೆಲೆಯಲ್ಲಿ “ಸೂರ್ಯಕಿರಣ” ಜೆಟ್ ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿಲ್ಲ.
ಭಾರತೀಯ ವಾಯುಪಡೆಯ ಸುಖೋಯ್ ಎಸ್ಯು-3 ಎಂಕೆ ‘ಮಿಸ್ಸಿಂಗ್ ಮ್ಯಾನ್’ ರಚನೆ ಮಾಡಿ ಸಾಹಿಲ್ ಅವರಿಗೆ ಗೌರವ ಸೂಚಿಸಿತು.
ನಾಲ್ಕು ಹೆಲಿಕಾಫ್ಟರ್ ಒಮ್ಮೆ ಬಂದು ಬಳಿಕ ನಾಲ್ಕು ಧಿಕ್ಕಿಗೆ ಚದರುವ ಮೂಲಕ ಯುದ್ಧ ಹೆಲಿಕಾಫ್ಟರ್ ’ಸಾರಂಗ್’ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿಶೇಷ ಗೌರವವನ್ನು ಸೂಚಿಸಿತು.
ಎಚ್ಎಎಲ್ನಿಂದ ಭಾರತೀಯ ಸೇನೆಗೆ ಸೇರ್ಪಡೆಗೊಂಡಿರುವ ಹಗುರ ಯುದ್ಧ ವಿಮಾನ ತೇಜಸ್, ವಿಮಾನಕ್ಕೆ ‘ತೇಜಸ್ ‘ ಎಂದು ನಾಮಕರಣ ಮಾಡಿದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು.
ಏರ್ ಬಸ್ 330 ನಿಯೋ, ಏರ್ಬಸ್ ಸಿ-295 ಟ್ರಾನ್ಸ್ಪೋರ್ಟ್ ಜೆಟ್, ಎನ್ಎಎಲ್-ಸರಸ್, ಎಚ್ಎಎಲ್ನ ಎಲ್ಯುಎಚ್ ಈ ಬಾರಿ ಏರ್ ಶೋನಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಯುದ್ಧ ವಿಮಾನಗಳಾಗಿವೆ.
ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸೇನೆಯ ಮುಖ್ಯಸ್ಥರು ಸೇರಿ ಅನೇಕ ಗಣ್ಯರ ಸಮ್ಮುಖದಲ್ಲಿ ವಿಮಾನಗಳು ಕಸರತ್ತು ನಡೆಸಿದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.