ನವದೆಹಲಿ: ಪುಲ್ವಾಮ ದಾಳಿಯ ಬಳಿಕ ಪಾಕಿಸ್ಥಾನ ಮತ್ತು ಭಾರತದ ನಡುವಣ ಸಂಬಂಧ ತೀರಾ ಹದಗೆಟ್ಟಿದೆ. ಭಾರತೀಯರಂತು ಪಾಕ್ನ ಹೆಸರು ಕೇಳಿದರೆ ಉರಿದು ಬೀಳುವ ಸ್ಥಿತಿಯಲ್ಲಿದ್ದಾರೆ. ಕುಲಭೂಷಣ್ ಯಾದವ್ ಪ್ರಕರಣದ ಸಂಬಂಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಹಾಜರಾದ ಭಾರತೀಯ ನಿಯೋಗವು ಪಾಕಿಸ್ಥಾನ ನಿಯೋಗದೊಂದಿಗೆ ನಡೆದುಕೊಂಡ ರೀತಿಯಿಂದ ಇದು ಸಾಬೀತಾಗಿದೆ. ಪಾಕ್ ಪ್ರತಿನಿಧಿ ಹ್ಯಾಂಡ್ ಶೇಕ್ಗೆ ಮುಂದಾದರೂ ಭಾರತದ ಪ್ರತಿನಿಧಿ ಕೇವಲ ನಮಸ್ತೆ ಮಾಡಿ ಕೈ ಕುಲುಕಲು ನಿರಾಕರಿಸಿದ್ದಾರೆ.
ಭಾರತದ ನಿಯೋಗದಲ್ಲಿ ಇದ್ದ ವಿದೇಶಾಂಗ ವ್ಯವಹಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ದೀಪಕ್ ಮಿತ್ತಲ್ ಮತ್ತು ನೆದರ್ಲ್ಯಾಂಡ್ನ ಭಾರತ ಪ್ರತಿನಿಧಿ ವೇಣು ರಾಜ್ಮೋನಿ ಅವರುಗಳು, ಪಾಕಿಸ್ತಾನದ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಖಾನ್ ಕೈ ಕುಲುಕಲು ಬಂದಾಗ ಅದನ್ನು ನಿರ್ಲಕ್ಷ್ಯಿಸಿ ಕೇವಲ ನಮಸ್ತೆ ಮಾಡಿದ್ದಾರೆ. ಜಾಧವ್ ಪ್ರಕರಣದ ವಿಚಾರಣೆ ನಡೆಯುವ ಮುನ್ನ ಈ ಘಟನೆ ನಡೆದಿದೆ.
48 ವರ್ಷದ ಕುಲಭೂಷಣ್ ಜಾಧವ್ ಅವರು, 2107ರ ಎಪ್ರಿಲ್ನಲ್ಲಿ ಪಾಕಿಸ್ಥಾನ ಮಿಲಿಟರಿ ಕೋರ್ಟ್ನಿಂದ ಗಲ್ಲು ಶಿಕ್ಷೆಗೆ ಒಳಗಾಗಿದ್ದಾರೆ. ಆದರೆ ಈ ನಿರ್ಧಾರವನ್ನು ಭಾರತ ಅಂತಾರಾಷ್ಟ್ರೀಯ ಕೋರ್ಟ್ನಲ್ಲಿ ಪ್ರಶ್ನಿಸಿದೆ. ಭಾರತದ ಪ್ರಯತ್ನಕ್ಕೆ ಜಯ ಎಂಬಂತೆ, 2018ರ ಮೇ 18ರಂದು ಅಂತಾರಾಷ್ಟ್ರೀಯ ಕೋರ್ಟ್ನ ನ್ಯಾಯಧೀಶರು ಜಾಧವ್ ಶಿಕ್ಷೆಯನ್ನು ತಡೆಹಿಡಿಯುವಂತೆ ಪಾಕ್ಗೆ ಆದೇಶಿಸಿದ್ದರು.
ಭಾರತದ ಪರವಾಗಿ, ಜಾಧವ್ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಖ್ಯಾತ ವಕೀಲ ಹರೀಶ್ ಸಾಲ್ವೆ ಅವರು ಮುನ್ನಡೆಸುತ್ತಿದ್ದಾರೆ. ನಿನ್ನೆಯಿಂದ ನಾಲ್ಕು ದಿನಗಳ ಸಾರ್ವಜನಿಕ ವಿಚಾರಣೆ ಆರಂಭಗೊಂಡಿದೆ.
ಜಾಧವ್ ಅವರು ಭಾರತದ ಪರವಾಗಿ ಪಾಕಿಸ್ಥಾನದಲ್ಲಿ ಗೂಢಚರ್ಯೆ ಮಾಡುತ್ತಿದ್ದ ವ್ಯಕ್ತಿ ಎಂಬುದು ಪಾಕ್ನ ಆರೋಪವಾಗಿದೆ. ಆದರೆ ಭಾರತ ಈ ಆರೋಪವನ್ನು ನಿರಾಕರಿಸಿದ್ದು, ಅಮಾಯಕನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಹಿಂಸೆ ನೀಡುತ್ತಿದೆ ಎಂದು ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.