ಸರ್ದಾರ್ ವಲ್ಲಭಾಬಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ಅ.31ರಿಂದ 22 ದಿನಗಳ ಕಾಲ ದಿನಕ್ಕೊಂದರಂತೆ ಭಾರತದ 22 ಭಾಷೆಗಳಲ್ಲಿ ಕೇಂದ್ರೀಯ ಮತ್ತು ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಸ್ನೇಹಿತರಿಗೆ ಶುಭಕೋರಲಿದ್ದಾರೆ.
ನವದೆಹಲಿ: ಸರ್ದಾರ್ ವಲ್ಲಭಾಬಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ಕೇಂದ್ರೀಯ ಮತ್ತು ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳು ಅಕ್ಟೋಬರ್ 31ರಿಂದ ನಿರಂತರ 22 ದಿನಗಳ ಕಾಲ ದಿನಕ್ಕೊಂದರಂತೆ ಭಾರತದ 22 ಭಾಷೆಗಳಲ್ಲಿ ಶಿಕ್ಷಕರು ಮತ್ತು ಸ್ನೇಹಿತರಿಗೆ ಶುಭಕೋರಲಿದ್ದಾರೆ.
ಅಲ್ಲದೇ ಮಾನವ ಸಂಪನ್ಮೂಲ ಸಚಿವಾಲಯವು ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಏಕತೆಗಾಗಿ ಓಟ, 2 ಸಾವಿರ ಕೇಂದ್ರೀಯ ಮತ್ತು ನವೋದಯ ಶಾಲೆಗಳಲ್ಲಿ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ, ಡ್ರಾಯಿಂಗ್ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಅಪಾರ ಪ್ರಮಾಣದ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
22 ದಿನಗಳ ಕಾಲ ವಿದ್ಯಾರ್ಥಿಗಳನ್ನು ದೇಶದ 22 ಭಾಷೆಗಳಲ್ಲಿ ಸಣ್ಣ ಪುಟ್ಟ ವಾಕ್ಯಗಳನ್ನು ಹೇಳುವಂತೆ, ಶುಭಕೋರುವಂತೆ ಪ್ರೋತ್ಸಾಹಿಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ರಾಷ್ಟ್ರ ರಾಜಧಾನಿ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳಿಂದ ದೇಶದ ಏಕತೆ ಮತ್ತು ಸೌಹಾರ್ದತೆಗೆ ಸಂಬಂಧಿಸಿದಂತೆ ಪ್ರತಿಜ್ಞಾ ತೆಗೆದುಕೊಳ್ಳಲಾಗುತ್ತಿದೆ.
ಪಟೇಲರ ಜನ್ಮದಿನವನ್ನು ‘ಏಕತಾ ದಿವಸ್’ ಆಗಿ ಆಚರಿಸಲಾಗುತ್ತಿದ್ದು, ಏಕತಾ ಓಟವನ್ನು ಆಯೋಜಿಸಲಾಗುತ್ತಿದೆ.
Source: The New Indian Express
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.