ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ, ದೇಶದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಎಎನ್ಎಂ ಕಾರ್ಯಕರ್ತೆಯರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
‘ದುರ್ಬಲ ಅಡಿಪಾಯದಲ್ಲಿ ಬಲಿಷ್ಠ ಕಟ್ಟಡವನ್ನು ನಿರ್ಮಾಣ ಮಾಡುವುದು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ಮಕ್ಕಳು ದುರ್ಬಲರಾಗಿದ್ದಾರೆ ದೇಶದ ಪ್ರಗತಿಯೂ ಕುಂಠಿತವಾಗುತ್ತದೆ’ ಎಂದು ಮೋದಿ ಈ ವೇಳೆ ಹೇಳಿದರು.
ಹರಿಯಾಣದ ಕರಿಷ್ಮಾ ಎಂಬ ಮಗು ಆಯುಷ್ಮಾನ್ ಯೋಜನೆಯ ಮೊದಲ ಫಲಾನುಭವಿ ಎಂಬುದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಆರೋಗ್ಯ ವಲಯಕ್ಕೆ ತಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ ಎಂದರು.
ಮಗು ಜನನವಾದ ಬಳಿಕದ ಸಾವಿರ ದಿನಗಳು ಅತ್ಯಂತ ಮಹತ್ವಪೂರ್ಣವಾಗಿದ್ದು, ಅವರ ಬೆಳವಣಿಗೆಯನ್ನು ನಿರ್ಧಾರ ಮಾಡುತ್ತದೆ. ಈ ಹಂತದಲ್ಲಿ ಅವರಿಗೆ ಪೋಷಕಾಂಶಯುಕ್ತ ಆಹಾರದ ಅಗತ್ಯವಿರುತ್ತದೆ. ಪ್ರಜೆಗಳಿಗೆ ಪೌಷ್ಠಕ ಆಹಾರ ಸಿಕ್ಕರೆ ಆ ದೇಶದ ಪ್ರಗತಿಯನ್ನು ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
ಅಂಗನವಾಡಿ ಕಾರ್ಯಕರ್ತರೊಂದಿಗೆ ಸೇರಿ ಆಹಾರ ಮೇಳವನ್ನು ಆಯೋಜನೆ ಮಾಡಲಾಗುತ್ತದೆ. ಈ ಮೇಳದಲ್ಲಿ ಆರೋಗ್ಯ, ಆಹಾರದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ. ರಾಷ್ಟ್ರೀಯ ಪೌಷ್ಠಿಕ ಆಹಾರ ಯೋಜನೆಯಿಂದ ತಾಯಿ, ಮಕ್ಕಳಲ್ಲಿ ರಕ್ತ ಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ ಎಂದರು.
ಮಗು ಹುಟ್ಟಿದ 42 ದಿನಗಳವರೆಗೆ ಆಶಾ ಕಾರ್ಯಕರ್ತೆಯರು ಮಗುವನ್ನು ಆರು ಬಾರಿ ಭೇಟಿಯಾಗಬೇಕು, ಇದನ್ನು ಪ್ರಸ್ತುತ 15 ತಿಂಗಳುಗಳವರೆಗೆ ವಿಸ್ತರಣೆ ಮಾಡಲಾಗಿದೆ, ಈ 15 ತಿಂಗಳಲ್ಲಿ ಅವರು 11 ಬಾರಿ ಮಗುವನ್ನು ಭೇಟಿಯಾಗುತ್ತಾರೆ ಎಂದರು.
‘ಪೋಷಣ್ ಮಾ’ ಎಂಬ ಕಾರ್ಯಕ್ರಮದಡಿ ಈ ಸಂವಾದ ಕಾರ್ಯವನ್ನು ಏರ್ಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.