ಲಕ್ನೋ: ಭಾರತದ ಗ್ರಾಮೀಣ ಭಾಗಗಳಿಗೆ ವಿವಿಧ ಎಲೆಕ್ಟ್ರಾನಿಕ್ ಸೇವೆಗಳನ್ನು ಒದಗಿಸಲು ಮುಖ್ಯ ಕೇಂದ್ರಗಳಂತಿರುವ ಕಾಮನ್ ಸರ್ವಿಸ್ ಸೆಂಟರ್ಸ್(ಸಿಎಸ್ಸಿ) ಈ ವರ್ಷದ ಅತ್ಯಂತದೊಳಗೆ 2.50 ಲಕ್ಷ ಗ್ರಾಮ ಪಂಚಾಯತಿಗಳನ್ನು ತಲುಪಲಿದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಮೂಲಸೌಕರ್ಯಗಳ ಮೂಲಕ ಬ್ಯಾಂಕಿಂಗ್, ಪಿಂಚಣಿ, ಡಿಜಿಟಲ್ ಸಾಕ್ಷರತೆ, ಟೆಲಿಮೆಡಿಸಿನ್ಗಳನ್ನು ಕುಗ್ರಾಮಗಳಿಗೂ ಇಂದು ತಲುಪುತ್ತಿದ್ದು, ಈ ನಿಟ್ಟಿನಲ್ಲಿ ಸಿಎಸ್ಸಿಗಳು ದೊಡ್ಡ ಕ್ರಾಂತಿಯನ್ನೇ ಮಾಡಿವೆ ಎಂದು ಅವರು ಹೇಳಿದ್ದಾರೆ.
ಸಿಎಸ್ಸಿ ಪ್ರಾಜೆಕ್ಟ್ಗಳು ಗ್ರಾಮೀಣ ಸಮುದಾಯಗಳಿಗೆ ಸ್ಥಿರ ಡಿಜಿಟಲ್ ಲಭ್ಯತೆಯನ್ನುಒದಗಿಸುತ್ತಿದೆ ಮತ್ತು ಈ ಸಮುದಾಯಗಳ ಸಬಲೀಕರಣಕ್ಕೆ ಅಗತ್ಯವುಳ್ಳ ಎಲ್ಲಾ ಮಾರ್ಗಗಳನ್ನು ಒದಗಿಸುತ್ತಿದೆ ಎಂದಿದ್ದಾರೆ.
ಪ್ರಾಯೋಗಿಕವಾಗಿ ಆರು ಗ್ರಾಮಗಳಲ್ಲಿ ಸಿಎಸ್ಸಿ ಮಾಡೆಲ್ಗಳನ್ನು ಅನುಸರಿಸಲಾಗಿದ್ದು, ವರ್ಷದ ಅಂತ್ಯಕ್ಕೆ 700 ಗ್ರಾಮಗಳನ್ನು ಇದು ತಲುಪಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.