ನವದೆಹಲಿ: ಈಶಾನ್ಯದಲ್ಲಿ ಅಕ್ರಮ ವಲಸೆ ಸಮಸ್ಯೆಯ ಹಿಂದೆ ಪಾಕಿಸ್ಥಾನ ಮತ್ತು ಚೀನಾ ದೇಶಗಳಿವೆ ಎಂಬ ಗಂಭೀರ ಆರೋಪವನ್ನು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ‘ಎರಡು ಕಾರಣಗಳಿಗಾಗಿ ಬಾಂಗ್ಲಾದಿಂದ ಜನ ವಲಸೆ ಬರುತ್ತಾರೆ. ಒಂದು ಅಲ್ಲಿ ನೆಲೆ ನಿಲ್ಲಲು ಜಾಗವೇ ಇಲ್ಲದಂತಾಗಿದೆ, ಮಳೆಗಾಲದ ನೆರೆಯಿಂದಾಗಿ ನೆಲೆ ನಿಲ್ಲಲು ಸಾಧ್ಯವಾಗದೆ ಈಶಾನ್ಯದತ್ತ ಜನ ವಲಸೆ ಬರುತ್ತಿದ್ದಾರೆ’ ಎಂದರು.
‘ಎರಡನೇಯ ಕಾರಣ ನಮ್ಮ ಪಶ್ಚಿಮ ಮತ್ತು ಉತ್ತರದ ನೆರೆಯ ರಾಷ್ಟ್ರ ಸಂಭವಿಸುತ್ತಿದೆ. ಪ್ರಾಕ್ಸಿ ಗೇಮ್ ಆಡುವ ಸಲುವಾಗಿ ಅವರು ಆ ಪ್ರದೇಶವನ್ನು ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದರ.
‘ವಲಸೆಯಿಂದ ಗುರುತಿನ ಸಮಸ್ಯೆ, ಭದ್ರತೆಯ ಸಮಸ್ಯೆ, ಅಭಿವೃದ್ಧಿಯ ಸಮಸ್ಯೆ, ಭೌಗೋಳಿಕ ಸಮಸ್ಯೆ, ಜನಸಂಖ್ಯೆಯ ಸಮಸ್ಯೆ ಉದ್ಭವಿಸುತ್ತದೆ. ಇದೆಲ್ಲವನ್ನೂ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.