ರಿಯಾದ್: ಸೌದಿ ಅರೇಬಿಯಾಗೆ ಅಧಿಕೃತ ಭೇಟಿಕೊಟ್ಟಿರುವ ವಿತ್ತಸಚಿವ ಅರುಣ್ ಜೇಟ್ಲಿ, ಭಾರತದ ಆ ದೇಶದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಬಯಸುತ್ತಿದೆ ಎಂದರು.
12ನೇ ಭಾರತ-ಸೌದಿ ಅರೇಬಿಯಾ ಜಂಟಿ ಸಮತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸೌದಿ ಅರೇಬಿಯಾ ಭಾರತದ ದೀರ್ಘಾವಧಿಯ ಪ್ರಮುಖ ಪಾಲುದಾರ, ವಿವಿಧ ವಲಯದಲ್ಲಿ ಉಭಯ ದೇಶಗಳು ತಮ್ಮ ಪಾಲುದಾರತ್ವವನ್ನು ಪರಿಶೋಧಿಸಿವೆ ಎಂದಿದ್ದಾರೆ.
ಸೌದಿಯೊಂದಿಗೆ ವ್ಯವಹಾರ-ವಾಣಿಜ್ಯ, ಭದ್ರತೆ, ಕೃಷಿ, ಮಾಹಿತಿ, ಮಾಧ್ಯಮ, ಆರೋಗ್ಯ, ಶಿಕ್ಷಣ ಮುಂತಾದವುಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.