ನಾಗಾಲ್ಯಾಂಡ್ನ ಟೆಂಸ್ತುತುಲ ಇಮ್ಸಾಂಗ್ ತನ್ನ ಸ್ನೇಹಿತರೊಂದಿಗೆ ವಾರಣಾಸಿಗೆ ಹೋಗಿ ಅಲ್ಲಿನ ಹಲವಾರು ಘಾಟ್ಗಳ ಚಿತ್ರಣವನ್ನೇ ಬದಲಿಸಿದ್ದಾರೆ. ಅಲ್ಲಿನ ಕಸಕಡ್ಡಿಗಳನ್ನು ತೆಗೆದು ಸ್ವಚ್ಛ ಮಾಡಿದ್ದಾರೆ. ಆಕೆಯ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿಯವರೂ ಶ್ಲಾಘಿಸಿದ್ದಾರೆ.
ಪ್ರಧಾನಿಯವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ ಬಳಿಕ ವಾರಣಾಸಿ ಮತ್ತು ಅಲ್ಲಿನ ಘಾಟ್ಗಳು ಹಿಂದಿಗಿಂತ ಈಗ ಸ್ವಚ್ಛವಾಗಿಯೇ, ಅಲ್ಲಿನ ಸ್ವಚ್ಛತೆಯ ಕಾರ್ಯವನ್ನು ಅಲ್ಲಿನ ಮ್ಸಿಪಲ್ ಕಾರ್ಪೋರೇಶನ್ ನೊಡಿಕೊಳ್ಳುತ್ತಿದೆ. ಆದರೆ ಅಲ್ಲಿನ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸಿ ಅವರನ್ನೂ ಈ ಕಾಯಕದಲ್ಲಿ ಭಾಗಿಯಾಗುವಂತೆ ಮಾಡಿದ ಕ್ರೆಡಿಟ್ ಇಮ್ ಸಾಂಗ್ ಮತ್ತು ಅವರ ಎನ್ಜಿಓ ಸರ್ಕಾರ್ನ ಸ್ನೇಹಿತರಿಗೆ ಸಲ್ಲಬೇಕು.
ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕೋರ್ಸು ಮಾಡಿರುವ ಅವರು, ವಿದ್ಯಾರ್ಥಿಗಳೊಂದಿಗೆ, ಸಾರ್ವಜನಿಕರೊಂದಿಗೆ ವರ್ಕ್ಶಾಪ್ಗಳನ್ನು ಮಾಡುತ್ತಿದ್ದಾರೆ, ಅವರ ಪ್ರಯತ್ನದ ಫಲವಾಗಿಯೇ ವಾರಣಾಸಿ ಘಾಟುಗಳು ಇಂದು ಸ್ವಚ್ಛವಾಗಿಯೇ ಎಂದು ಸ್ಥಳಿಯರು ಹೇಳುತ್ತಾರೆ.
3 ವರ್ಷದಲ್ಲಿ ಇಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಪಾಲಿಕೆ ಸಿಬ್ಬಂದಿಗಳು ಬಂದು ಘನ, ಹಸಿ ತ್ಯಾಜ್ಯಗಳನ್ನು ಕೊಂಡೊಯ್ಯುತ್ತಿದ್ದಾರೆ. ನಡೆದಾಡಲೂ ಅಹಸ್ಯ ಎನಿಸುತ್ತಿದ್ದ ಪ್ರದೇಶಗಳು ಇಂದು ಶುದ್ಧವಾಗಿ ಕಂಗೊಳಿಸುತ್ತಿವೆ. ಅದಕ್ಕೆಲ್ಲ ಇಮ್ಸಾಂಗ್ನಂತವರ ಶ್ರಮವೇ ಕಾರಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.