ನವದೆಹಲಿ: 1971 ರಲ್ಲಿ ಭಾರತ-ಪಾಕಿಸ್ಥಾನ ಮಧ್ಯೆ ನಡೆದ ಯುದ್ಧದ ಸಮಯದಲ್ಲಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಶುಕ್ರವಾರದಂದು ’ವಿಜಯ ದಿವಸ್’ ಸಂದರ್ಭದಲ್ಲಿ ದೇಶದಾದ್ಯಂತ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.
ಈ ಸಂಧರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮೂರು ಸೇವಾನಿರತ ಮುಖ್ಯಸ್ಥರೊಂದಿಗೆ ನವದೆಹಲಿಯ ’ಅಮರ್ ಜವಾನ್ ಜ್ಯೋತಿ’ಯಲ್ಲಿ ಗೌರವ ಸಲ್ಲಿಸಿದರು.
1971 ರ ಈ ದಿನದಂದು ಪಾಕಿಸ್ಥಾನ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಝಿ ಯುದ್ಧದಲ್ಲಿ ಸೋತ ನಂತರ ತನ್ನ 93,000 ಸೈನಿಕರ ಗುಂಪಿನೊಂದಿಗೆ ಭಾರತೀಯ ಸೇನೆ ಒಳಗೊಂಡ ಮಿತ್ರಪಡೆಗಳಿಗೆ ಶರಣಾದರು. ಈ ಯುದ್ಧವು ಢಾಕಾದಲ್ಲಿ ಜನರಲ್ ಜಗ್ಜಿತ್ ಸಿಂಗ್ ಅರೋರಾ ನೇತೃತ್ವದಲ್ಲಿ ನಡೆದಿತ್ತು.
ಯುದ್ಧದ ಕೊನೆಯಲ್ಲಿ ಪೂರ್ವ ಪಾಕಿಸ್ಥಾನ ಬಾಂಗ್ಲಾದೇಶವಾಗಿ ಪ್ರತ್ಯೇಕವಾಗಲು ಕಾರಣವಾಯಿತು.
ವಿಜಯ ದಿವಸ್ನ್ನು ಸಂಭ್ರಮಿಸಲು ಈಸ್ಟರ್ನ್ ಕಮಾಂಡ್ನ ಪ್ರಧಾನ ಕಛೇರಿಯಲ್ಲಿ ಕೊಲ್ಕತ್ತಾದ ಫೋರ್ಟ್ ವಿಲಿಯಮ್ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಸಂರ್ಭಮಾಚರಣೆಯಲ್ಲಿ ಬಾಂಗ್ಲಾದೇಶದ ಗೃಹ ಸಚಿವ ಅಸಾದುಝಮಾನ್ ಖಾನ್ ನೇತೃತ್ವದಲ್ಲಿ ನೆರೆಯ ದೇಶದ 72 ಯುದ್ಧ ಅನುಭವಿಗಳ ಸದಸ್ಯರನ್ನೊಳಗೊಂಡ ನಿಯೋಗ ಮತ್ತು ಮುಕ್ತಿ ಜೋಧಾದ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.