ನವದೆಹಲಿ: ಸ್ವರಾಜ್ಯ ಮ್ಯಾಗಜೀನ್ಗೆ ಸಂದರ್ಶನ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಅರ್ಥ ವ್ಯವಸ್ಥೆಯನ್ನು ಸಂಕಷ್ಟಕ್ಕೆ ದೂಡಿದ್ದ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಆರ್ಥಿಕ ತಜ್ಞ ಪ್ರಧಾನಿ ಮತ್ತು ಎಲ್ಲಾ ತಿಳಿದ ವಿತ್ತ ಸಚಿವರು ದಶಕಗಳ ಕಾಲ ನಂಬಲಸಾಧ್ಯವಾದ ರೀತಿಯಲ್ಲಿ ಭಾರತದ ಅರ್ಥವ್ಯವಸ್ಥೆಯನ್ನು ಬಿಗಡಾಯಿಸಿದ್ದರು, ನಮ್ಮ ಸರ್ಕಾರ ನಾಲ್ಕು ವರ್ಷದ ಅವಧಿಯಲ್ಲಿ ಆರ್ಥಿಕತೆಯನ್ನು ಸರಿ ದಾರಿಗೆ ತಂದಿದೆ ಎಂದಿದ್ದಾರೆ.
ಉದ್ಯೋಗ ವಲಯದಲ್ಲಿ ಬೆಳವಣಿಗೆಯಾಗುತ್ತಿಲ್ಲ ಎಂಬ ಆರೋಪವನ್ನು ನಿರಾಕರಿಸಿದ ಅವರು, ರಾಜ್ಯಗಳು ಒಂದರ ಹಿಂದೊಂದರಂತೆ ಉದ್ಯೋಗಗಳನ್ನು ಸೃಷ್ಟಿಸುತ್ತಾ ಸಾಗಿದೆ, ಹೀಗಿರುವಾಗ ಕೇಂದ್ರ ಉದ್ಯೋಗ ಸೃಷ್ಟಿ ಮಾಡಿಲ್ಲ ಎನ್ನಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದಾಗ ಆರ್ಥಿಕತೆ ಕೆಟ್ಟ ಸ್ಥಿತಿಯಲ್ಲಿ ಇತ್ತು, ಬಜೆಟ್ ಅಂಕಿಅಂಶಗಳು ಕೂಡ ಸಂಶಯಾಸ್ಪದವಾಗಿತ್ತು ಎಂದರು.
ನಾವು ರಾಜನೀತಿಯ ಬದಲಾಗಿ ರಾಷ್ಟ್ರ ನೀತಿಯನ್ನು ಅನುಸರಿಸುತ್ತಿದ್ದೇವೆ, ಭಾರತ ಮೊದಲು ಎಂಬ ಧ್ಯೇಯ ನಮ್ಮದು ಎಂದಿದ್ದಾರೆ.
ಸಮಸ್ಯೆಗಳನ್ನು ಮುಸುಕಿನಡಿ ಇಡಲು ನಾವು ಬಯಸುವುದಿಲ್ಲ, ಅವುಗಳನ್ನು ಎದುರಿಸಿ ಪರಿಹರಿಸಲು ಬಯಸುತ್ತೇವೆ, ನಾವು ಭಾರತದ ಆರ್ಥಿಕತೆಯನ್ನು ಸುಧಾರಿಸಿ, ಪರಿವರ್ತನೆಗೊಳಿಸಿ, ಬಲಿಷ್ಠಗೊಳಿಸಲು ಬಯಸುತ್ತೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.