ಲಕ್ನೋ: ಉತ್ತರಪ್ರದೇಶವನ್ನು ಗೂಂಡಾಗಳಿಂದ ಮುಕ್ತಗೊಳಿಸುವ ಪಣತೊಟ್ಟಿರುವ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಪೊಲೀಸ್ ಇಲಾಖೆಗೆ ಎನ್ಕೌಂಟರ್ ನಡೆಸಲು ಸಂಪೂರ್ಣ ಅನುಮತಿಯನ್ನು ನೀಡಿದ್ದಾರೆ.
ಇದರಿಂದ ಕಳೆದ ಕೆಲ ದಿನಗಳಲ್ಲಿ 1 ಸಾವಿರಕ್ಕೂ ಅಧಿಕ ಎನ್ಕೌಂಟರ್ಗಳು ನಡೆದಿದ್ದು, 40 ಮಂದಿ ರೌಡಿಗಳು ಜೀವ ಕಳೆದುಕೊಂಡಿದ್ದಾರೆ. 2270 ಮಂದಿ ಅರೆಸ್ಟ್ ಆಗಿದ್ದಾರೆ. ಇದಕ್ಕೆ ಹೆದರಿರುವ ಇನ್ನೂ ಕೆಲ ರೌಡಿಗಳು ಜೈಲು ಪಾಲಾಗಿ ಜಾಮೀನು ಸಿಕ್ಕರೂ ಹೊರಬರದೆ ಜೈಲಿನಲ್ಲೇ ಇರಲು ಬಯಸುತ್ತಿದ್ದಾರೆ. ಎನ್ಕೌಂಟರ್ 4 ಮಂದಿ ಪೊಲೀಸರನ್ನು ಬಲಿತೆಗೆದುಕೊಂಡಿರುವುದು ದುರಾದೃಷ್ಟ.
ಎಲ್ಲದಕ್ಕೂ ಮಿಗಿಲಾಗಿ ರೌಡಿ ಇತಿಹಾಸವುಳ್ಳವರು ತಮ್ಮ ಇತಿಹಾಸ ಬದಲಾಯಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಹೊಸ ಜೀವನವನ್ನು ಆರಂಭಿಸುತ್ತಿದ್ದಾರೆ. 2 ವರ್ಷದ ಅಕ್ವೀಲ್ ಎಂಬಾತ ರೌಡಿ ಶೀಟರ್ ಆಗಿದ್ದ. ಆದರೀಗ ಸೈಕಲ್ ರಿಪೇರಿ ಶಾಪ್ವೊಂದನ್ನು ತೆರೆದು ಅದರಲ್ಲೇ ಜೀವನಕಟ್ಟಿಕೊಳ್ಳಲು ಮುಂದಾಗಿದ್ದಾನೆ. ರೌಡಿ ಶೀಟರ್ ಇಮ್ರಾನ್ ಎಂಬಾತ ಸ್ಕ್ರಾಪ್ ಡೀಲರ್ ಆಗಿದ್ದಾನೆ. ರವಿ ಮತ್ತು ಹೇಮಂತ್ ಎಂಬುವವರು ಆಟೋ ಓಡಿಸಲು ಆರಂಭಿಸಿದ್ದಾರೆ.
ಯೋಗಿ ಸರ್ಕಾರ ಅಪರಾಧಿಗಳ ವಿರುದ್ಧ ಕೈಗೊಂಡಿರುವ ಆಕ್ರಮಣಕಾರಿ ಕ್ರಮದಿಂದಾಗಿ ರೌಡಿಗಳ ಮನಸ್ಥಿತಿಯಲ್ಲಿ ಬದಲಾವಣೆಗಳಾಗುತ್ತಿವೆ. ಅವರು ಹೆದರಿದ್ದಾರೆ ಮತ್ತು ಬದಲಾಗಲು ಬಯಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.