ನವದೆಹಲಿ: ಕಮಲ ಅರಳುವಂತೆ ಮಾಡಿದ ಈಶಾನ್ಯದ ಮೂರು ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪ್ರತ್ಯೇಕ ಟ್ವಿಟ್ಗಳ ಮೂಲಕ ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ಜನತೆಗೆ ತಮ್ಮ ಕೃತಜ್ಞತೆ ಹೇಳಿದ್ದಾರೆ.
‘ತ್ರಿಪುರಾದ ಐತಿಹಾಸಿಕ ಗೆಲುವು ಸೈದ್ಧಾಂತಿಕವೂ ಹೌದು. ವಿವೇಚನಾರಹಿತ ಮತ್ತು ಬೆದರಿಕೆಯ ವಿರುದ್ಧ ಪ್ರಜಾಪ್ರಭುತ್ವ ಇಲ್ಲಿ ಗೆದ್ದಿದೆ. ಭಯದ ವಿರುದ್ಧ ಇಂದು ಶಾಂತಿ ಮತ್ತು ಅಹಿಂಸೆ ಗೆದ್ದಿದೆ. ತ್ರಿಪುರಾಗೆ ಅತ್ಯಗತ್ಯವಾದ ಉತ್ತಮ ಆಡಳಿತವನ್ನು ನಾವು ನೀಡುತ್ತೇವೆ’ಎಂದಿದ್ದಾರೆ.
‘ನಾಗಾಲ್ಯಾಂಡ್ನಲ್ಲಿ ನಮ್ಮ ಮತ್ತು ನಮ್ಮ ಮೈತ್ರಿಗೆ ಬೆಂಬಲವಿತ್ತಿರುವುದಕ್ಕೆ ಧನ್ಯವಾದ. ನಾಗಾಲ್ಯಾಂಡ್ನ ಸಮೃದ್ಧಿ ಮತ್ತು ಪ್ರಗತಿಗೆ ನಿರಂತರ ಶ್ರಮವಹಿಸಿ ಕಾರ್ಯ ಮಾಡುತ್ತೇನೆಂದು ಸಹೋದರ ಸಹೋದರಿಯರಿಗೆ ಭರವಸೆ ನೀಡುತ್ತೇನೆ. ನಾಗಾ ಬಿಜೆಪಿ ಘಟಕದ ಅವಿರತ ಪ್ರಯತ್ನಕ್ಕೂ ಕೃತಜ್ಞತೆಗಳು’ ಎಂದಿದ್ದಾರೆ.
‘ಮೇಘಾಲಯ ಜನತೆಗೆ ನಮ್ಮ ಧನ್ಯವಾದ. ಮೇಘಾಲಯದ ಪ್ರಗತಿಯೇ ನಮ್ಮ ಅತೀ ಮುಖ್ಯ ಧ್ಯೇಯ. ಆ ರಾಜ್ಯದಲ್ಲಿ ಶ್ರಮವಹಿಸಿ ದುಡಿದ ಕಾರ್ಯಕರ್ತರಿಗೆ ನಮನಗಳು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.