ಲಾಹೋರ್: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರು ಗಲ್ಲಿಗೇರಿಸಲ್ಪಟ್ಟು 86ವರ್ಷಗಳ ಬಳಿಕ ಇದೀಗ ಅವರು ಗಲ್ಲಿಗೇರಿಸಲ್ಪಟ್ಟ ಲಾಹೋರ್ನ ಶಾದ್ಮನ್ ಚೌಕ್ಗೆ ಮರುನಾಮಕರಣ ಮಾಡುವಂತೆ ಪಾಕಿಸ್ಥಾನದ ನ್ಯಾಯಾಲಯವೊಂದಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಅದೇ ಜಾಗದಲ್ಲಿ ಅವರ ಮೂರ್ತಿಯನ್ನು ಸ್ಥಾಪಿಸುವಂತೆ ಕೋರಲಾಗಿದೆ.
1931ರ ಮಾರ್ಚ್ 23ರಂದು ರಾಜ್ಗುರು, ಸುಖ್ದೇವ್ ಮತ್ತು ಭಗತ್ ಸಿಂಗ್ ಅವರನ್ನು ಬ್ರಿಟಿಷರು ಲಾಹೋರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಿದ್ದರು. ಬಳಿಕ ಆ ಜಾಗದಲ್ಲಿ ಶಾದ್ಮನ್ ಚೌಕ್ನ್ನು ಸ್ಥಾಪನೆ ಮಾಡಲಾಯಿತು.
ಇದೀಗ ಭಗತ್ ಸಿಂಗ್ ಮೆಮೋರಿಯಲ್ ಫೌಂಡೇಶನ್ ಮುಖ್ಯಸ್ಥ ಇಮ್ತಿಯಾಝ್ ರಶೀದ್ ಖುರೇಶಿ ಅವರು ಲಾಹೋರ್ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದು, ಆ ಜಾಗವನ್ನು ಭಗತ್ ಸಿಂಗ್ ಸ್ಮರಣಾರ್ಥ ಮರುನಾಮಕರಣ ಮಾಡಬೇಕು, ಅಲ್ಲಿ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಕೋರಿದ್ದಾರೆ.
ಈ ಅರ್ಜಿಯ ವಿಚಾರಣೆಯನ್ನು ಮಾ.5ಕ್ಕೆ ನ್ಯಾಯಾಲಯ ಮುಂದೂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.