ನವದೆಹಲಿ: ಪಾಕಿಸ್ಥಾನ ಟೆರರಿಸ್ಥಾನ ಎಂದು ವಿಶ್ವಸಂಸ್ಥೆಯಲ್ಲಿ ಕೂಗಿ ಹೇಳಿದ ಎನಮ್ ಗಂಭೀರ್ ಬಗ್ಗೆ ಭಾರತೀಯರು ತಿಳಿದುಕೊಂಡಿರುವುದು ಕಡಿಮೆ. ಆಕೆ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಮಿಷನ್ನ ಮೊದಲ ಕಾರ್ಯದರ್ಶಿ.
ಈ ಬಾರಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಪ್ರಧಾನಿ ಶಹೀದ್ ಖಕ್ಕನ್ ಅವರಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದಂತೆ ಕಳೆದ ವರ್ಷವೂ ಅವರು ನವಾಝ್ ಶರೀಫ್ಗೆ ಕಟುವಾದ ಉತ್ತರವನ್ನು ನೀಡಿದ್ದರು. ಪಾಕ್ ವಿರುದ್ಧ ಗುಡುಗಿದ್ದರು. ಪ್ರಾಚೀನ ಕಾಲದ ಅಧ್ಯಯನ ಕೇಂದ್ರ ತಕ್ಷಶಿಲಾದ ನಾಡು ಈಗ ಭಯೋತ್ಪಾದನೆಯ ದೊಡ್ಡ ಸಂಸ್ಥೆಯಾಗಿದೆ ಎಂದಿದ್ದರು.
ವಿಶ್ವಸಂಸ್ಥೆಗೆ ನೇಮಕವಾಗುವ ಮುನ್ನ ಅವರು ವಿದೇಶಾಂಗ ಸಚಿವಾಲಯದ ಪಾಕಿಸ್ಥಾನ ಡಿವಿಜನ್ನಲ್ಲಿ ಕಾರ್ಯನಿರ್ವಹಿಸಿದ್ದರು. ಹೀಗಾಗೀ ಪಾಕಿಸ್ಥಾನ ಅವರಿಗೆ ಚಿರಪರಿಚಿತ. ಅದರ ಕುತಂತ್ರಗಳೂ ಚಿರಪರಿಚಿತ.
ದೆಹಲಿ ವಿಶ್ವವಿದ್ಯಾಲಯ ಹಿಂದೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಎನಮ್, 2005ರ ಬ್ಯಾಚ್ನ ಐಎಫ್ಎಸ್ ಅಧಿಕಾರಿ.
ಮ್ಯಾಡ್ರಿಡ್, ಸ್ಪೇನ್, ಅರ್ಜೇಂಟೀನಾ, ಬ್ರೆಝಿಲ್ನಲ್ಲಿ ಇವರು ಕಾರ್ಯನಿರ್ವಹಿಸಿದ್ದಾರೆ. ಸ್ಪಾನಿಶ್ ಭಾಷೆಯಲ್ಲಿ ಪರಿಣಿತೆ.
ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಇವರು, ಅಲ್ಲಿ ಯುಎನ್ಎಸ್ಸಿ ಸುಧಾರಣೆ ಮತ್ತು ಭಯೋತ್ಪಾದನ ತಡೆ ವಿಷಯಗಳನ್ನು ನೋಡಿಕೊಳ್ಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.