ನವದೆಹಲಿ: ನವರಾತ್ರಿಯ ಒಂಭತ್ತು ಪವಿತ್ರ ದಿನಗಳನ್ನು ಉಪವಾಸದ ಮೂಲಕ ಆಚರಿಸುವ ಕೋಟ್ಯಾಂತರ ಭಕ್ತರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಒಬ್ಬರು. ಕಳೆದ ನಾಲ್ಕು ದಶಕಗಳಿಂದ ಅವರು ನವರಾತ್ರಿಯಲ್ಲಿ ಉಪವಾಸ ಆಚರಿಸುತ್ತಾ ಬಂದಿದ್ದಾರೆ.
ಒಂಭತ್ತು ದಿನಗಳ ಕಾಲ ಮೋದಿ ಕೇವಲ ನೀರನ್ನು ಸೇವಿಸುವ ಮೂಲಕ ಕಠಿಣ ವ್ರತಾಚರಣೆ ಮಾಡುತ್ತಾರೆ. ಪ್ರಧಾನಿಯಾದ ಬಳಿಕ ಒತ್ತಡಗಳ ಕಾರ್ಯದ ನಡುವೆಯೂ ಅವರು ಉಪವಾಸವನ್ನು ಮುಂದುವರೆಸುತ್ತಾರೆ.
ಈ ಬಾರಿಯ ನವರಾತ್ರಿಯಲ್ಲೂ ಮೋದಿ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಕಾರ್ಯದಲ್ಲಿ ತೋಡಗಲಿದ್ದಾರೆ. ಇಂದು ಅವರು ಆರ್ಎಸ್ಎಸ್ ಮುಖಂಡ ಲಕ್ಷ್ಮಣ್ ರಾವ್ ಇನಾಮ್ದಾರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾಳೆ ವಾರಣಾಸಿಗೆ ತೆರಳಿ ವಡೋದರ-ವಾರಣಾಸಿ ಸಂಚರಿಸುವ ಮಹಾತ್ಮ ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.