ತಿರುವನಂತಪುರಂ: ಜಲ ಸಂಪನ್ಮೂಲವನ್ನು ಮಲಿನಗೊಳಿಸುವವರಿಗೆ ಶಿಕ್ಷೆಯ ಪ್ರಮಾಣ ಮತ್ತು ದಂಡವನ್ನು ಹೆಚ್ಚಿಸಲು ಕೇರಳ ಸರ್ಕಾರ ನಿರ್ಧರಿಸಿದೆ.
ಬುಧವಾರ ನಡೆಸಲಾದ ಸಚಿವ ಸಂಪುಟ ಸಭೆಯಲ್ಲಿ ಕೇರಳ ನೀರಾವರಿ ಮತ್ತು ಜಲ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿಯನ್ನು ತರಲು ನಿರ್ಧರಿಸಲಾಗಿದೆ.
ನೀರಿನ ಮೂಲವನ್ನು ಮಲಿನಗೊಳಿಸುವವರಿಗೆ 3 ವರ್ಷಗಳ ಜೈಲುವಾಸ ಮತ್ತು 2 ಲಕ್ಷ ರೂಪಾಯಿ ದಂಡವನ್ನು ವಿಧಿಸಲು ಕಾಯ್ದೆಯಡಿ ಅವಕಾಶ ಕಲ್ಪಸುವಂತೆ ತಿದ್ದುಪಡಿ ತರಲಾಗುತ್ತಿದೆ.
ಪ್ರ್ಸತುತ ಕೇರಳದಲ್ಲಿ ನೀರನ್ನು ಮಲಿನಗೊಳಿಸುವವರಿಗೆ 10ರಿಂದ 20 ಸಾವಿರ ರೂಪಾಯಿ ದಂಡ ಮತ್ತು 1 ವರ್ಷಗಳ ಸೆರೆವಾಸವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.