ಸೀತಾಮರ್ಹಿ: ನೇಪಾಳ ಬಾರ್ಡರ್ನಲ್ಲಿ ಮಾನವ ಕಳ್ಳ ಸಾಗಾಣೆಯನ್ನು ತಡೆಯಲು ಸಶಸ್ತ್ರ ಸಿಮಾ ಬಲ ಅವಿರತ ಶ್ರಮಪಡುತ್ತಿದೆ. ಎಸ್ಎಸ್ಬಿಯ ಜನರಲ್ ಡೈರೆಕ್ಟರ್ ಸೇರಿದಂತೆ ತನ್ನ ನಾಯಕತ್ವವನ್ನು ಅದು ಬಿಹಾರದ ಸೀತಾಮರ್ಹಿಗೆ ಶಿಫ್ಟ್ ಮಾಡಿದೆ. ಅತೀ ಹೆಚ್ಚು ಮಾನವ ಕಳ್ಳ ಸಾಗಾಣೆಗೆ ಒಳಗಾದ ಪ್ರದೇಶ ಇದಾಗಿದೆ.
ಇಲ್ಲಿನ ಜನತೆಗೆ ಶಿಕ್ಷಣ ಮತ್ತು ಉದ್ಯೋಗದ ಕೊರತೆಯಿರುವುದೇ ಮಾನವ ಕಳ್ಳ ಸಾಗಾಣೆ ಹೆಚ್ಚಾಗಿ ಈ ಭಾಗದಲ್ಲಿ ನಡೆಯಲು ಕಾರಣ. ಇದಕ್ಕಾಗಿ ಎಸ್ಎಸ್ಬಿ ನಿರಂತರವಾಗಿ ಸ್ಥಳಿಯರಿಗೆ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದೆ.
2015ರಿಂದ ಎಸ್ಎಸ್ಬಿಯು 600 ಜನರನ್ನು ಕಳ್ಳ ಸಾಗಾಣೆಯಾಗುವುದರಿಂದ ತಪ್ಪಿಸಿದೆ, ಇವರೆಲ್ಲಾ ಭಾರತೀಯ ಮತ್ತು ನೇಪಾಳಕ್ಕೆ ಸೇರಿದವರಾಗಿದ್ದಾರೆ. ಮುಂಬಯಿ, ಬೆಂಗಳೂರು, ಲೂಧೀಯಾನ, ಚೆನ್ನೈನಂತಹ ಜಾಗಗಳಿಗೆ ಇವರನ್ನು ಉದ್ಯೋಗಕ್ಕಾಗಿ ಸಾಗಾಣೆ ಮಾಡಲಾಗುತ್ತಿತ್ತು.
ಗುಪ್ತಚರ ಮಾಹಿತಿ ಮತ್ತು ಸ್ಥಳಿಯರ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ. ಆರೋಪಿಗಳನ್ನು ಬಂಧಿಸಲಾಗುತ್ತದೆ. ಯೋಧರು ಸ್ಥಳಿಯರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿ ಅವರಿಗೆ ಮಾಹಿತಿ ನೀಡುವಂತೆ ಪ್ರೇರಣೆ ನೀಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.