ನವದೆಹಲಿ: ನವರಾತ್ರಿ ಸಂಭ್ರಮ ಹತ್ತಿರವಾಗುತ್ತಿದೆ, ದುಷ್ಟತನವನ್ನು ಸಂಹಾರ ಮಾಡಿ ಜಗತ್ತಿಗೆ ಒಳ್ಳೆಯದನ್ನು ಮಾಡಿದ, ಹೆಣ್ಣಿನ ಶಕ್ತಿ ಏನೆಂಬುದನ್ನು ತೋರಿಸಿದ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸುವ ಸಮಯವಿದು. ಈ ಹಿನ್ನಲೆಯಲ್ಲಿ ದೆಹಲಿಯ ಮಾತ್ರಿ ಮಂದಿರ್ ಸರ್ಬೊಜನಿನ್ ದುರ್ಗಾ ಪೂಜಾ ಸಮಿತಿಯು ‘ನಾರಿ ಶಕ್ತಿ’ ಎಂಬ ಥೀಮ್ನೊಂದಿಗೆ ದುರ್ಗಾ ಪೆಂಡಾಲ್ಗಳನ್ನು ಹಾಕಿದೆ.
ಮಕ್ಕಳಿಗೆ ಸುರಕ್ಷಿತ ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಮಹಿಳೆ ವಹಿಸಬೇಕಾದ ಪಾತ್ರ ಬಹು ಮುಖ್ಯವಾದುದು, ಮಾ ದುರ್ಗೆ ನಾರಿಶಕ್ತಿಯ ಪ್ರತಿರೂಪ. ಮಹಿಳಾ ಸಬಲೀಕರಣ ನಮ್ಮ ಮೂಲ ಉದ್ದೇಶವಾಗಬೇಕು ಎಂಬ ದೃಷ್ಟಿಯಿಂದ ’ನಾರಿಶಕ್ತಿ’ ಥೀಮ್ನಲ್ಲಿ ಪೆಂಡಾಲ್ಗಳನ್ನು ಹಾಕಿದ್ದಾಗಿ ಅದರ ಮುಖ್ಯಸ್ಥರು ಹೇಳುತ್ತಾರೆ.
ಈ ಪೆಂಡಾಲ್ಗಳಲ್ಲಿ ಕಲ್ಪನಾ ಚಾವ್ಲಾ, ಲತಾ ಮಂಗೇಶ್ಕರ್, ದೀಪಾ ಕರ್ಮಾಕರ್ ಸೇರಿದಂತೆ ಈ ಕಾಲದ ಹಲವಾರು ಮಹಿಳಾ ಸಾಧಕರ ಮಾಹಿತಿಗಳನ್ನು ನೀಡಲಾಗುತ್ತದೆ. ಇದಕ್ಕೆ ಮೂರು ಬಾಗಿಲುಗಳಿದ್ದು, ಮೊದಲ ಬಾಗಿಲು 13ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಹತ್ತಿದ ಬುಡಕಟ್ಟು ಯುವತಿ ಪೂರ್ಣಾ ಅವರಿಗೆ ಅರ್ಪಿಸಲಾಗಿದೆ. ಎರಡನೇ ಬಾಗಿಲನ್ನು ದುರ್ಗಾದೇವಿಗೆ ಅರ್ಪಣೆ ಮಾಡಲಾಗಿದೆ. 3ನೇ ಬಾಗಿಲನ್ನು ಮರ ನೆಟ್ಟು ’ಆಮ್ಲಜನಕದ ಮೂಲ’ ಎಂಬರ್ಥದಲ್ಲಿ ಮಹಿಳಾ ಸಮುದಾಯಕ್ಕೆ ಅರ್ಪಣೆ ಮಾಡಲಾಗಿದೆ.
ಪಿ.ಟಿ.ಉಷಾ, ಮೇರಿಕೋಮ್, ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಅಂಜಲಿ ಭಗತ್ ಸೇರಿದಂತೆ ಹಲವು ಸಾಧಕರ ಕಟೌಟ್ಗಳೂ ಈ ಪೆಂಡಾಲ್ನಲ್ಲಿ ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.