ಶ್ರೀನಗರ: ವೆಚ್ಚ ಏರಿಕೆಯನ್ನು ಸೇರ್ಪಡೆಗೊಳಿಸಿದ ಬಳಿಕ ಜಮ್ಮು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನದ ಮೊತ್ತ 1 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಾಗಲಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಶ್ರೀನಗರದಲ್ಲಿ ಸೋಮವಾರ ಈ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿದ ಅವರು, ಏರಿಕೆಯಾದ ವೆಚ್ಚಗಳನ್ನು ಸೇರಿಸಿದ ಬಳಿಕ ಅನುದಾನ 1 ಲಕ್ಷ ಕೋಟಿ ರೂಪಾಯಿಯನ್ನು ದಾಟಲಿದೆ ಎಂದರು.
ಕಾಶ್ಮೀರದ ಸಮಸ್ಯೆ 5 ‘ಸಿ’ಗಳಿಂದ ಪರಿಹಾರವಾಗಲಿದೆ. ಅದೆಂದರೆ, ಕಂಪ್ಯಾಶನ್(ಸಹಾನುಭೂತಿ), ಕಮ್ಯೂನಿಕೇಶನ್(ಸಂವಹನ), ಕೋಎಕ್ಸಿಸ್ಟೆನ್ಸ್ (ಸಹಬಾಳ್ವೆ), ಕಾನ್ಫಿಡೆನ್ಸ್(ವಿಶ್ವಾಸ), ಕನ್ಸಿಸ್ಟೆನ್ಸಿ(ಸ್ಥಿರತೆ) ಎಂದರು.
ಅಗತ್ಯಬಿದ್ದರೆ ವರ್ಷಕ್ಕೆ 50 ಬಾರಿಯಾದರೂ ಕಾಶ್ಮೀರಕ್ಕೆ ಆಗಮಿಸಲು ಸಿದ್ಧ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.