ಮಧ್ಯಪ್ರದೇಶದ ಇಂದೋರ್ ದೇಶದ ಎಲ್ಲಾ ನಗರಗಳನ್ನು ಹಿಂದಿಕ್ಕಿ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಖ್ಯಾತಿಯನ್ನು ಪಡೆಯಲು ಆ ನಗರದಲ್ಲಿನ ಜನತೆ ಸಾಕಷ್ಟು ಶ್ರಮಪಟ್ಟಿದ್ದಾರೆ ಮತ್ತು ಪಡುತ್ತಿದ್ದಾರೆ.
ಇಲ್ಲಿನ ಬೀದಿಯಲ್ಲಿ ಚಿಪ್ಸ್ ಪ್ಯಾಕೇಟ್ಗಳು, ಹಲ್ದಿರಾಮ್ ಪ್ಯಾಕೇಟ್ಗಳು, ಹಣ್ಣುಗಳ ಸಿಪ್ಪೆ, ಪ್ಲಾಸ್ಟಿಕ್ ಬ್ಯಾಗ್ಗಳು ಕಾಣಸಿಗುವುದಿಲ್ಲ. ಬೀದಿ ನಾಯಿಗಳಾಗಲಿ, ಬೀದಿ ದನಗಳಾಗಲಿ ಇಲ್ಲಿ ಕಣ್ಣಿಗೆ ಬೀಳುವುದಿಲ್ಲ. ಕಸಗಳನ್ನು ಹೊರಗೆ ಹಾಕುವ ಸಾಹಸವನ್ನೂ ಯಾರೂ ಮಾಡುವುದಿಲ್ಲ.
ಇಲ್ಲಿನ ಮಹಾನಗರ ಪಾಲಿಕೆಯ ಕಮಿಷನರ್ 2009ನೇ ಬ್ಯಾಚ್ನ ಐಎಎಸ್ ಅಧಿಕಾರಿ 49 ವರ್ಷದ ಮನೀಶ್ ಸಿಂಗ್ ಇಂಧೋರನ್ನು ದೇಶದ ಅತೀ ಸ್ವಚ್ಛ ನಗರವನ್ನಾಗಿಸಲು ಸಾಕಷ್ಟು ಶ್ರಮಿಸಿದ್ದಾರೆ. ಇಲ್ಲಿ ಕಸದ ವಿರುದ್ಧ ನಿರಂತರ ಹೋರಾಟ ನಡೆಯುತ್ತದೆ, ವಾಹನದಲ್ಲಿ ಕಸ ಹಾಕದಂತೆ ಘೋಷಣೆ ಕೂಗುತ್ತಾ ಹೋಗಲಾಗುತ್ತದೆ.
ಈ ನಗರ ದಿನಕ್ಕೆ 1,100 ಮೆಟ್ರಿಕ್ ಟನ್ ಘನ ತ್ಯಾಜ್ಯವನ್ನು ಉತ್ಪಾದನೆ ಮಾಡುತ್ತದೆ. ಇವುಗಳ ನಿರ್ವಹಣೆಯನ್ನು ಪಾಲಿಕೆ ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಇಲ್ಲಿನ ಮುಖ್ಯ ರಸ್ತೆಗಳನ್ನು ದಿನಕ್ಕೆ ಮೂರು ಬಾರಿ ಗುಡಿಸಲಾಗುತ್ತದೆ. ಜನರು ಮನೆಯ ಕಸವನ್ನು ತಂದು ಹಾಕುತ್ತಾರೆ ಎಂಬ ಕಾರಣಕ್ಕೆ 1400 ದೊಡ್ಡ ಕಸದಬುಟ್ಟಿಗಳನ್ನು ತೆಗೆದು ಹಾಕಲಾಗಿದೆ. ಪುಟ್ಟ ಪುಟ್ಟ ಕಸದಬುಟ್ಟಿಗಳನ್ನು ಮಾತ್ರ ಇಡಲಾಗಿದೆ. ಬದಲಾಗಿ ಪ್ರತಿ ಮನೆಯವರೂ ತಮ್ಮ ತಮ್ಮ ಕಸಗಳನ್ನು ವಿಂಗಡನೆ ಮಾಡಿ ಪಾಲಿಕೆಯ ಕಸ ಸಂಗ್ರಹಕಾರರಿಗೆ ನೀಡುವುದು ಅನಿವಾರ್ಯ.
ಅಪಾರ ಸಂಖ್ಯೆಯ ಸಾರ್ವಜನಿಕ ಟಾಯ್ಲೆಟ್ಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಈ ನಗರವನ್ನು ಪಾಲಿಕೆ ಮಾತ್ರವಲ್ಲದೇ ಸಾರ್ವಜನಿಕರೂ ಸ್ವಚ್ಛವಾಗಿಡಲು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಹೀಗಾಗಿಯೇ ಅದು ಇಂದು ದೇಶದ ಅತೀ ಸ್ವಚ್ಛತ ನಗರ ಎಂಬ ಹೆಗ್ಗಳಿಕೆಗೆ ಮಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.