ನವದೆಹಲಿ : ಬಾಲಿವುಡ್ ನಟ ಅಕ್ಷಯ್ ಕುಮಾರ್ಗೆ ಭಾರತೀಯ ಸೇನೆಯ ಮೇಲಿರುವರ ಪ್ರೀತಿ ಎಲ್ಲರಿಗೂ ತಿಳಿದದ್ದೇ. ಈ ಹಿಂದೆ ತಮ್ಮ ಸಲಹೆಯ ಮೂಲಕ ಗೃಹ ಮಂತ್ರಾಲಯ, www.bharatkeveer.gov.in ವೆಬ್ ಸೈಟ್ ಆರಂಭಿಸುವಂತೆ ಮಾಡಿದ್ದ ಅಕ್ಷಯ್, ಸೋಮವಾರ, ತಮ್ಮ ಮನಃಮುಟ್ಟುವ ಕರೆಯ ಮೂಲಕ, ವಿಶ್ವ ಹೂಡಿಕೆದಾರರ ಸಮಾವೇಶ ‘ಇಂಡಿಯಾ ರೈಸಿಂಗ್’ ನಲ್ಲಿ ಸಿಇಒ ಗಳು ಹಾಗೂ ಸಂಸ್ಥೆಗಳ ಮುಖ್ಯಸ್ಥರಿಂದ ದೇಶಕ್ಕಾಗಿ ಪ್ರಾಣಬಿಟ್ಟ ಸೈನಿಕರ ಕುಟುಂಬಗಳಿಗೆ ಕೆಲವೇ ನಿಮಿಷಗಳಲ್ಲಿ ರೂ. 6.5 ಕೋಟಿ ಸಂಗ್ರಹಿಸಿದ್ದಾರೆ!
ತಮ್ಮ ತಯಾರಿಯೇ ಇಲ್ಲದ ಭಾಷಣದಲ್ಲಿ, ಅಕ್ಷಯ್ ಕುಮಾರ್ ವೆಬ್ ಸೈಟ್ ದಾನಿಗಳಿಗೆ ಮೃತರಾದ ಅರೆಸೈನಿಕ ಪಡೆಯ ಯೋಧನ ಕುಟುಂಬಕ್ಕೆ ನೇರವಾಗಿ ಹಣ ಕಳುಹಿಸಲು ಹೇಗೆ ಸಹಾಯ ಮಾಡುತ್ತದೆ ಎಂದು ವಿವರಿಸಿದರು. “ ಇಲ್ಲಿರುವ ಹೆಚ್ಚಿನವರು ಸಮಾಜದಲ್ಲಿರುವ, ಹಣ-ಹೆಸರು ಎರಡನ್ನೂ ಹೊಂದಿರುವವರೇ ಆಗಿರುವುದರಿಂದ ನಾನು ಭಾರತ್ ಕೆ ವೀರ್ ಬಗ್ಗೆ ಮಾತನಾಡಲು ಬಯಸಿದ್ದೆ. ಅವರು ನಮ್ಮ ಸೇನೆಯ ನೆರವಿಗೆ ಬರದಿದ್ದರೆ, ಇನ್ಯಾರು ಬರುತ್ತಾರೆ?”, ಎನ್ನುತ್ತಾರೆ ಅಕ್ಷಯ್.
ಅಕ್ಷಯ್ ಹೇಳುವಂತೆ ಸದ್ಯಕ್ಕೆ ವೆಬ್ಸೈಟ್ನಲ್ಲಿ ದೇಶಕ್ಕಾಗಿ ಮೃತಪಟ್ಟ 112 ಸೈನಿಕರ ವಿವರವಿದೆ. ಪ್ರತಿ ಕುಟುಂಬಕ್ಕೂ ಕನಿಷ್ಠ ರೂ.15 ಲಕ್ಷ ನಿಧಿ ತಲುಪುವವರೆಗೂ ವಿವರಗಳು ವೆಬ್ಸೈಟ್ನಲ್ಲಿಯೇ ಇರುತ್ತವೆ. “ಈ ವೀರರು ದೇಶದ ವಿವಿಧ ರಾಜ್ಯಗಳಿಗೆ ಸೇರಿದವರು. ಇಲ್ಲಿ ಸೇರಿರುವ ಸಿಇಒಗಳು ಒಂದೊಂದು ರಾಜ್ಯವನ್ನು ದತ್ತು ಸ್ವೀಕರಿಸಿದರೂ ಹೆಚ್ಚಿನ ವೀರ ಸೇನಾನಿಗಳಿಗೆ ಬೇಕಾದ ನಿಧಿ ಸಂಗ್ರಹಿಸಬಹುದು. ನಾನು ಮಹಾರಾಷ್ಟ್ರವನ್ನು ದತ್ತು ಪಡೆಯುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ” ಎಂದರು.
ಇಷ್ಟು ಹೇಳುತ್ತಿದ್ದಂತೆ ಪ್ರತಿಕ್ರಿಯೆ ಹರಿದುಬಂತು. ಮೋತಿಲಾಲ್ ಓಸ್ವಾಲ್, ವಿಕ್ಕಿ ಒಬೆರಾಯ್, ಪುನೀತ್ ದಾಲ್ಮಿಯಾ, ಸಮೀರ್ ಗೆಹ್ಲೋಟ್, ಪ್ರೇರಣಾ ಅರೋರಾ, ಕ್ವಾಲಿಟಿ ಮಿಲ್ಕ್, ಎಲ್ & ಟಿ ಸೇರಿದಂತೆ ಹಲವರು ಕೊಡುಗೆ ನೀಡಿದರು.
“ಇದರಿಂದ ಹೃದಯ ತುಂಬಿ ಬಂದಿದೆ. ವೆಬ್ಸೈಟ್ನಲ್ಲಿ ಪಟ್ಟಿ ಮಾಡಿರುವ 60 % ಕ್ಕಿಂತಲೂ ಹೆಚ್ಚಿನವರಿಗೆ ಇದರಿಂದ ಪೂರ್ಣ ಧನಸಹಾಯ ನೀಡಲು ಸಾಧ್ಯವಾಗುತ್ತದೆ,” ಎಂದು ಅಕ್ಷಯ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.