ಭುವನೇಶ್ವರ: ಶ್ರವಣ ಕುಮಾರ ತನ್ನ ತಂದೆ ತಾಯಿರನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆಗೆ ಕರೆದೊಯ್ದ ಕಥೆ ನಮಗೆಲ್ಲಾ ಗೊತ್ತೇ ಇದೆ. ಇದೀಗ ಒರಿಸ್ಸಾದ ಬುಡಕಟ್ಟು ಜನಾಂಗದ ಯುವಕನೊಬ್ಬ ನ್ಯಾಯಕ್ಕಾಗಿ ತನ್ನ ಹೆತ್ತವರನ್ನು ಹೆಗಲ ಮೇಲೆ ಕೂರಿಸಿ 40 ಕಿಲೋಮೀಟರ್ ಸಂಚರಿಸಿದ್ದಾನೆ.
ಒರಿಸ್ಸಾದ ಮಯೂರ್ಭಂಜ್ ಜಿಲ್ಲೆಯ ಮೊರದ ಗ್ರಾಮದ ಯುವಕ ಕಾರ್ತಿಕ್ ಸಿಂಗ್ ಅವರ ವಿರುದ್ಧ 2009ರಲ್ಲಿ ನಕಲಿ ಎಫ್ಐಆರ್ನ್ನು ದಾಖಲಿಸಲಾಗಿತ್ತು. ಇದಕ್ಕಾಗಿ 18 ದಿನಗಳ ಸೆರೆವಾಸವನ್ನೂ ಅವರು ಅನುಭವಿಸಿದ್ದರು. ಈ ಪ್ರಕರಣ ಇನ್ನೂ ಇತ್ಯರ್ಥವಾಗದೆ ನ್ಯಾಯಾಲಯದಲ್ಲಿ ಇದೆ.
ಆದರೆ ಗ್ರಾಮಸ್ಥರು, ಜನಾಂಗದವರು ಕಾರ್ತಿಕ್ರನ್ನು ಬಹಿಷ್ಕರಿಸಿದ್ದು, ಅವರಿಗೆ ಕೆಲಸ ನೀಡುತ್ತಿಲ್ಲ. ವಯಸ್ಸಾದ ಹೆತ್ತವರನ್ನು ತೊರೆದು ದೂರದ ಊರಿಗೆ ಕೆಲಸಕ್ಕೆ ಹೋಗಲು ಅವರಿಂದ ಸಾಧ್ಯವಾಗುತ್ತಿಲ್ಲ. ಮದುವೆಯಾಗಲು ಯಾರೂ ಹೆಣ್ಣು ಕೊಡುತ್ತಿಲ್ಲ. ಒಟ್ಟಿನಲ್ಲಿ ಸುಳ್ಳು ಪ್ರಕರಣದಿಂದ ಅವರ ಜೀವನ ಹಳಿ ತಪ್ಪಿದ್ದು, ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿಲ್ಲ.
ಹೀಗಾಗೀ ಅವರು ತಮ್ಮ ಹೆತ್ತವರನ್ನು ತಕ್ಕಡಿಯಾಕರದ ದೊಡ್ಡ ಪರಿಕರದಲ್ಲಿ ಕೂರಿಸಿ ನ್ಯಾಯಾ ಕೇಳಿ 40 ಕಿಮೀ ದೂರ ನಡೆದಿದ್ದಾರೆ.
ತಮ್ಮ ಹೆತ್ತವರು ಸಾಯುವ ಮುನ್ನ ನ್ಯಾಯ ಪಡೆದು ಅವರ ಕಣ್ಣಲ್ಲಿ ತಾನು ಅಪರಾಧಿಯಲ್ಲ ಎಂದು ಸಾಬೀತಾಗಬೇಕು ಎಂಬ ಆಶಯ ಕಾರ್ತಿಕ್ರದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.