ನವದೆಹಲಿ: ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಾಕ್ಷಿಗಳ ಪಾಲಿಗ್ರಾಫ್ ಪರೀಕ್ಷೆ ನಡೆಸಲು ದೆಹಲಿ ಪೊಲೀಸರು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಇಂದು ಕೋರ್ಟ್ ಅದರ ವಿಚಾರಣೆ ನಡಸಲಿದೆ.
ಸಂಸದ ಹಾಗೂ ಸುನಂದಾ ಪತಿ ಶಶಿ ತರೂರ್ ಅವರ ಮನೆಗೆಲಸದಾತ ನಾರಾಯಣ್ ಸಿಂಗ್, ಚಾಲಕ ಬಜರಂಗಿ ಮತ್ತು ಸ್ನೇಹಿತ ಸಂಜಯ್ ದೇವನ್ ಅವರು ಪುಷ್ಕರ್ ಸಾವು ಪ್ರಕರಣದಲ್ಲಿ ಮಹತ್ವವಾದ ಸತ್ಯಾಂಶವನ್ನು ಬಚ್ಚಿಡುತ್ತಿದ್ದು, ಈ ಮೂವರು ಪ್ರಕರಣದಲ್ಲಿ ಶಂಕಿತರಾಗಿದ್ದಾರೆ. ತರೂರ್ ಅವರಿಗೆ ಅತಿ ಆಪ್ತರಾಗಿದ್ದ ಇವರು ಹಲವು ಮಹತ್ವದ ಸಂಗತಿಗಳನ್ನು ಬಹಿರಂಗಪಡಿಸಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ ಎನ್ನಲು ಹಲವಾರು ಸುಳಿವುಗಳು ಸಿಕ್ಕಿವೆವೆ.
ಸುನಂದಾ ಸಾಯುವುದಕ್ಕೂ ಕೆಲ ದಿನಗಳ ಮುನ್ನ ಇವರು ಹೋಟೆಲ್ ಲೀಲಾ ಪ್ಯಾಲೇಸ್ನಲ್ಲಿ ತಂಗಿದ್ದರು. ಆದುದರಿಂದ ಇವರ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದರು. ಈ ಮೂವರಿಗೆ ಕೋರ್ಟ್ಗೆ ಇಂದು ಹಾಜರಾಗಲು ಸಮನ್ಸ್ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.