ಜಮಖಂಡಿ: ಬರಿದಾಗಿರುವ ಕೃಷ್ಣೆಯತ್ತ ನೋಡಿದ ಜನತೆ ನೆರೆಯ ಮಹಾರಾಷ್ರ್ತದ ಕೊಯಿನಾದತ್ತ ಆಸೆ ಕಂಗಳಿಂದ ನೇರ ದೃಷ್ಟಿಯಿಂದ ನೋಡುವ ಪ್ರಸಂಗವೂ ಸಹ ಇಲ್ಲದಾಗಿದೆ. ಅಲ್ಲಿಯೂ ಸಹ ನೀರಿನ ಕೊರತೆ ಎದ್ದು ಕಾಣುತ್ತಿದೆ. ಎಲ್ಲಿ ನೋಡಿದರಲ್ಲಿ ನದಿಯ ಪಾತ್ರವು ಬರಿದಾಗುತ್ತ ಹೋಗಿದೆ.
ಹೌದು. ಇದು ಕೃಷ್ಣಾ ತೀರದ ರೈತರ ಸಂಕಷ್ಟದ ಮನದಾಳದ ಮಾತು. ಕಳೆದ ಬಾರಿ ಮಳೆಯಾಗದೇ ಇದ್ದ ಕಾರಣ, ಬೇಸಿಗೆ ಪ್ರಾರಂಭಕ್ಕೇ ಮುನ್ನವೇ ನದಿ ಬತ್ತುತ್ತಿವೆ. ಕೆಲವೇ ದಿನಗಳ್ಳಿ ಸಂಪೂರ್ಣ ಖಾಲಿಯಾಗುವ ಭಯ ಎಲ್ಲರನ್ನೂ ಕಾಡುತ್ತಿದೆ. ನದಿಯ ಪಾತ್ರದಲ್ಲಿ ಒಂದು ಬೊಗಸೆ ನೀರು ಸಹ ಸಿಗದ ಪರಿಸ್ಥಿತಿ ಉಂಟಾಗಿದ್ದು, ಭೀಕರ ಪರಿಸ್ಥಿತಿಗೆ ಎದುರಾಗಿದೆ.
ಕುಸಿಯುತ್ತಿದೆ ಅಂತರ್ಜಲ ಮಟ್ಟ
ಬರುಬರುತ್ತ ವಾತಾವರಣದ ಏರು ಪೇರಿನಿಂದ ಮಳೆಯ ಪ್ರಮಾಣ ಕುಂಠಿತವಾಗಿದೆ. ಪರಿಣಾಮ ಕೆರೆ ಕಟ್ಟೆಗಳು, ನದಿ ಬಾವಿಗಳ ಒಡಲು ತುಂಬುತ್ತಲೇ ಇಲ್ಲ. ಇದರಿಂದ ಬೇಸಿಗೆಯಲ್ಲಿ ಜನತೆ ನೀರಿಗಾಗಿ ಅತೀವ ತೊಂದರೆ ಅನುಭವಿಸಬೇಕಾಗಿ ಬರುತ್ತದೆ.
ಸರಕಾರಕ್ಕೆ ಕಾಣದ ಕೃಷ್ಣೆ
ಸುಮಾರು ವಸಂತಗಳಿಂದ ಈ ಭಾಗದ ಜೀವಜಲವಾಗಿದ್ದ ಕೃಷ್ಣೆಯ ತಟದ ಜನಜೀವನ ಬೇಸಿಗೆಯಿಲ್ಲಿ ಅಸ್ತವ್ಯಸ್ಥ ಗೊಂಡರೂ ಸಹ ಸರಕಾರ ಮಾತ್ರ ದಿವ್ಯ ಮೌನಕ್ಕೆ ಶರಣಾಗಿದೆ. ಕಾವೇರಿಗಿರುವ ಕಾಳಜಿ ಕೃಷ್ಣೆಗಿಲ್ಲ. ಕೃಷ್ಣೆ ಮಾತ್ರ ಇಂದಿಗೂ ಸಹ ಬಡವಿ. ಆಲಮಟ್ಟಿ ಜಲಾಶಯವೇನೋ ನಿರ್ಮಾಣವಾಗಿದೆ, ಅದರ ಹಿನ್ನೀರಿನಲ್ಲಿ ಸಾವಿರಾರು ಕುಟುಂಬಗಳು ತಮ್ಮ ಮೂಲ ನೆಲೆ ಕಳೆದುಕೊಂಡು ಬೇರೆಡೆ ಹೋಗಿವ. ಅವರ ತ್ಯಾಗಕ್ಕೂ ಇಲ್ಲಿಲ್ಲ ಬೆಲೆ.
ಮುಂಗಡ ಪತ್ರದಲ್ಲಿ ನೀರಾವರಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸುವುದಾಗಿ ಸರಕಾರ ಹೇಳಿಕೊಳ್ಳುತ್ತ ಬಂದಿದೆ. ಆದರೆ ಇದುವರೆಗೂ ಮಾತ್ರ ಯಾವುದೇ ಸೂಕ್ತ ಅಭಿವೃದ್ಧಿಯಂತೂ ಕಾಣುತ್ತಿಲ್ಲ.
ಅವಳಿ ಜಿಲ್ಲೆಗಳಲ್ಲಿ ಕೃಷ್ಣೆ, ಘಟಪ್ರಭೆ, ಮಲಪ್ರಭೆ ನದಿಗಳು ಹರಿಯುತ್ತವೆ, ಆದರೆ ಅವುಗಳ ಉಪಯೋಗ ಶೂನ್ಯ. ಯಾವುದೇ ನೀರಾವರಿ ಯೋಜನೆಗಳು ಕಾರ್ಯ ರೂಪಕ್ಕೆ ಬಾರದೇ ಇರುವದು ವಿಪರ್ಯಾಸ.
ಪ್ರಸಕ್ತ ಸಾಲಿನಲ್ಲಿ ನೀರಿನ ಹಾಹಾಕಾರ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಅದನ್ನು ನಿಭಾಯಿಸಲು ಸಮರೋಪಾದಿಯಲ್ಲಿ ಸರಕಾರವು ಸನ್ನದ್ಧವಾದರೆ ಮಾತ್ರ ಸಮಸ್ಯೆ ಬಗೆಹರಿಯಬಹುದು.
ಚಿತ್ರ ಲೇಖನ: ಗೋಪಾಲ ಪಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.