ನವದೆಹಲಿ: ಭಾರತದಲ್ಲಿ ಅಸಹಿಷ್ಣುತೆಗೆ ಯಾವುದೇ ಜಾಗವಿಲ್ಲ, ವಿಶ್ವವಿದ್ಯಾನಿಲಯಗಳು ಅಶಾಂತಿಯ ಸಂಸ್ಕೃತಿಯನ್ನು ಪ್ರಚೋದಿಸುವ ಬದಲು ಉತ್ತಮ ಚರ್ಚೆಗಳಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳೀದ್ದಾರೆ.
ಗುರುವಾರ ಕೊಚ್ಚಿಯಲ್ಲಿ ನಡೆದ ಆರನೇ ಕೆ.ಎಸ್ ರಾಜಮೋನಿ ಮೆಮೊರಿಯಲ್ ಲೆಕ್ಚರ್ನಲ್ಲಿ ಭಾಗವಹಿಸಿ ‘ಇಂಡಿಯಾ @ 70’ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು, ಉನ್ನತ ಶಿಕ್ಷಣ ಸಂಸ್ಥೆಗಳು ಭಾರತವನ್ನು ಜ್ಞಾನ ಕೇಂದ್ರವನ್ನಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಈ ವಿದ್ಯಾ ದೇಗುಲಗಳು ಸೃಜನಶೀಲತೆ ಮತ್ತು ಸ್ವತಂತ್ರ ಚಿಂತನೆಗಳು ಪ್ರತಿಧ್ವನಿತವಾಗುವಂತೆ ನೋಡಿಕೊಳ್ಳಬೇಕು ಎಂದರು.
‘ಆದರೆ ವಿಶ್ವವಿದ್ಯಾಲಯಗಳು ಹಿಂಸೆ ಮತ್ತು ಅಶಾಂತಿಯ ತಾಣವಾಗುತ್ತಿರುವುದು ದುರಂತವಾಗಿದ್ದು, ಅಸಹಿಷ್ಣು ಭಾರತೀಯರಿಗೆ ಭಾರತದಲ್ಲಿ ಯಾವುದೇ ಜಾಗವಿಲ್ಲ. ಭಾರತ ಪ್ರಾಚೀನ ಕಾಲದಿಂದಲೂ ಸ್ವತಂತ್ರ ಚಿಂತನೆ, ಅಭಿವ್ಯಕ್ತಿ, ವಾಕ್ ಸ್ವಾತಂತ್ರ್ಯದ ಭದ್ರಕೋಟೆಯಾಗಿದೆ’ ಎಂದಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನ ನಮಗೆ ಕಲ್ಪಿಸಿದ ಮೂಲಭೂತ ಹಕ್ಕಾಗಿದ್ದು, ಕಾನೂನುಬದ್ಧ ಟೀಕೆಗಳಿಗೆ ಅವಕಾಶವಿದೆ, ನಾಯಕರುಗಳು ಮತ್ತು ರಾಜಕಾರಣಿಗಳು ಜನರ ಮಾತನ್ನು ಆಲಿಸಬೇಕು, ಅವರೊಂದಿಗೆ ಬೆರೆಯಬೇಕು, ಅವರಿಂದ ಕಲಿಯಬೇಕು ಮತ್ತು ಅವರ ಅಗತ್ಯಗಳಿಗೆ ಸ್ಪಂದಿಸಬೇಕು. ಜನರನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು ಎಂದು ಹೇಳಿದರು.
ಪ್ರಸ್ತುತ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿವಾದಾತ್ಮಕ ಘಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.