ನವದೆಹಲಿ: ವಿಶ್ವ ಇಂದು ಭಯೋತ್ಪಾದನೆ ಹಾಗೂ ಹವಮಾನ ವೈಪರೀತ್ಯಗಳಿಂದ ನಲುಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ದೇಶ ದೇಶಗಳ ನಡುವೆ ಶಾಂತಿ ಅಗತ್ಯ. ವೈಯಕ್ತಿವಾಗಿ, ಕುಟುಂಬದೊಳಗೆ, ಸಮಾಜದಲ್ಲಿ ಮತ್ತು ದೇಶಗಳ ನಡುವೆ ಶಾಂತಿ, ಸಾಮರಸ್ಯ ಮೂಡಿಸಲು ಯೋಗ ದಾರಿದೀಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುರುವಾರ ರಿಷಿಕೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಹಬ್ಬದ 29ನೇ ಅವತರಣಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಅವರು ಮಾತನಾಡಿದರು.
ಯೋಗ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಉತ್ತರಾಖಂಡ ರಾಜ್ಯಪಾಲ ಕೆ.ಕೆ.ಪೌಲ್ ಅವರು, ದೇವಭೂಮಿ ಉತ್ತರಾಖಂಡದಿಂದ ಯೋಗ ಹುಟ್ಟಿ ಇಡೀ ವಿಶ್ವಕ್ಕೆ ಪಸರಿಸಿದೆ. ವರ್ಷದಿಂದ ವರ್ಷಕ್ಕೆ ವಿದೇಶಗಳ ವಿವಿಧ ಮೂಲೆಗಳಿಂದ ಜನ ಯೋಗ ಹಬ್ಬಕ್ಕೆ ಆಗಮಿಸುತ್ತಿರುವುದು ಸಂತೋಷ ತಂದಿದೆ ಎಂದರು.
70 ಸಂತರು, 20 ದೇಶಗಳ ಯೋಗ ತಜ್ಞರು ಸೇರಿಂದ ಹಲವಾರು ಮಂದಿ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.