ನವದೆಹಲಿ: ಆಟಗಾರರನ್ನು ಅನಕ್ಷರಸ್ಥರು ಎಂದು ಜರೆದಿದ್ದ ಸಾಹಿತಿ ಜಾವೇದ್ ಅಖ್ತರ್ಗೆ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಟ್ವಿಟರ್ ಮೂಲಕ ಕಿವಿಮಾತು ಹೇಳಿದ್ದಾರೆ.
‘ನಮ್ಮ ಆಟಗಾರರನ್ನು ದಯವಿಟ್ಟು ಅನಕ್ಷರಸ್ಥರು ಎನ್ನಬೇಡಿ, ನೀವು ನಿಮ್ಮ ಕ್ಷೇತ್ರದಲ್ಲಿ ಚಾಂಪಿಯನ್, ಅಂತೆಯೇ ಅವರು ಅವರ ಕ್ಷೇತ್ರದಲ್ಲಿ ಚಾಂಪಿಯನ್ಗಳಾಗಿದ್ದಾರೆ. ಭಾರತಕ್ಕೆ ಅವರ ಬಗ್ಗೆ ಹೆಮ್ಮೆ ಇದೆ’ ಎಂದು ಗೋಯೆಲ್ ಜಾವೆದ್ಗೆ ತಿರುಗೇಟು ನೀಡಿದ್ದಾರೆ.
ನನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ ಯುದ್ಧ ಕೊಂದಿದೆ ಎಂಬ ಹುತಾತ್ಮ ಯೋಧನ ಪುತ್ರಿ ಗುರುಮೆಹರ್ ಕೌರ್ ಅವರ ವಾದಕ್ಕೆ ವಿರುದ್ಧವಾಗಿ ಸಂಬಂಧಿಸಿದಂತೆ ಕುಸ್ತಿಪಟು ಯೋಗೇಶ್ವರ್ ದತ್ತ್ ಅವರು ಟ್ವಿಟ್ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ಟ್ವಿಟ್ ಮಾಡಿದ್ದ ಜಾವೆದ್, ಕುಸ್ತಿಪಟುಗಳು ಅನಕ್ಷರಸ್ಥರು ಆದರೆ ನಮ್ಮ ಕೆಲ ವಿದ್ಯಾವಂತರಿಗೆ ಏನಾಗಿದೆ ಎಂದಿದ್ದರು. ಅವರ ಈ ಟ್ವಿಟ್ಗೆ ಭಾರೀ ವಿರೋಧಗಳು ವ್ಯಕ್ತವಾಗಿವೆ.
ಸ್ವತಃ ದತ್ತ್ ಅವರೇ ‘ನೀವು ಕವಿತೆ, ಹಾಡುಗಳನ್ನು ರಚಿಸಿರಬಹುದು ಆದರೆ ನಾವು ಕೂಡ ವಿಶ್ವ ವೇದಿಕೆಯಲ್ಲಿ ಇತಿಹಾಸವನ್ನು ರಚಿಸಿದ್ದೇವೆ’ ಎಂದು ಜಾವೆದ್ಗೆ ತಿರುಗೇಟು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.