ಸೋನಿಪಥ್: ಹೋರಾಟ ನಡೆಸದಿದ್ದರೆ ನಾವು ಪ್ರಗತಿ ಕಾಣುವುದಿಲ್ಲ, ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಧೈರ್ಯದಿಂದ ಮುನ್ನುಗ್ಗಿದರೆ ಯಶಸ್ಸು ನಿಶ್ಚಿತ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದ್ದಾಳೆ ಬಂಗಾರದ ಪದಕ ವಿಜೇತ ಪ್ಯಾರ ಅಥ್ಲೇಟ್ ಜ್ಯೋತಿ ಜಂಗ್ಡ.
ಸಾಮಾನ್ಯ ಜೀವನ ನಡೆಸುವುದಕ್ಕೆಯೇ ಹೋರಾಟ ನಡೆಸಬೇಕಾದ ವಿಕಲಚೇತನೆಯಾಗಿರುವ ಜ್ಯೋತಿ ಇದೀಗ ಹಾಕಿ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದು ಅಸಮಾನ್ಯ ಸಾಧನೆ ಮಾಡಿದ್ದಾಳೆ.
ಪಾರ್ಶ್ವವಾಯು ಪೀಡಿತ ಕೈಗಳನ್ನು ಹೊಂದಿರುವ ಜ್ಯೋತಿ ಬದುಕಲ್ಲಿ ಎದುರಾದ ಎಲ್ಲಾ ಅಡೆ ತಡೆಗಳನ್ನು ಎದುರಿಸಿ ಹಾಕಿ ಆಟಗಾರ್ತಿಯಾಗುವ ತನ್ನ ಕನಸನ್ನು ನನಸಾಗಿಸಿಕೊಂಡು ಇದೀಗ ಸಮಸ್ತ ಯುವ ಜನಾಂಗಗಕ್ಕೆ ಸ್ಫೂರ್ತಿಯ ಸೆಲೆ, ರೋಲ್ ಮಾಡೆಲ್. ಈಕೆಯ ಸಾಧನೆಯ ಪಾಲು ತಂದೆಯ ಅಗಲುವಿಕೆಯ ಬಳಿಕ ಒಂಟಿಯಾಗಿ ಮಗಳನ್ನು ಸಾಕಿ ಸಲುಹಿ ಆಕೆಯನ್ನು ಧೀರೆ, ದಿಟ್ಟೆಯನ್ನಾಗಿಸಿದ ತಾಯಿಗೂ ಸಲ್ಲುತ್ತದೆ.
ಸ್ಪಷ್ಟ ಗುರಿ ಮತ್ತು ಆತ್ಮಸ್ಥೈರ್ಯವಿದ್ದರೆ ಅಸಾಧ್ಯವೆನೆಸಿದ ಕೆಲಸಗಳನ್ನೂ ಮಾಡಿ ತೋರಿಸಬಹುದು ಎಂಬುದಕ್ಕೆ ಜ್ಯೋತಿ ಜಿಂಗ್ಡ ಅವರ ಬದುಕೇ ಒಂದು ಅದ್ಭುತ ಉದಾಹರಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.