ಅಹ್ಮದಾಬಾದ್: ಸುಪ್ರಸಿದ್ಧ ಲೇಖಕ, ಅಂಕಣಗಾರ, ಹಾಸ್ಯಗಾರ ತಾರಕ್ ಮೆಹ್ತಾ ಅವರು ಇಹಲೋಕ ತ್ಯಜಿಸಿದ್ದಾರೆ. ‘ದುನಿಯಾ ನೆ ಉಂದಾ ಚಸ್ಮಾ’ ಎಂಬ ಗುಜರಾತಿ ಅಂಕಣದ ಮೂಲಕ ಅವರು ಖ್ಯಾತರಾಗಿದ್ದರು.
ಹಲವಾರು ಹಾಸ್ಯ ಲೇಖನಗಳನ್ನು ಗುಜರಾತಿ ಭಾಷೆಗೆ ಭಾಷಾಂತರಿಸಿದ ಹಿರಿಮೆ ಅವರದ್ದು, ಇವರ ಅಂಕಣವನ್ನು ಆಧರಿಸಿಯೇ 2008ರಲ್ಲಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ’ ಎಂಬ ಹಿಂದಿ ಹಾಸ್ಯ ಧಾರವಾಹಿ ಆರಂಭಗೊಂಡು ಅತಿ ಜನಪ್ರಿಯತೆ ಪಡೆಯಿತು.
87 ವರ್ಷದ ಅವರು ಧೀರ್ಘ ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಮೆಹ್ತಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು, ಗಣ್ಯಾತೀಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
‘ಸುಪ್ರಸಿದ್ಧ ಲೇಖಕ ತಾರಕ್ ಮೆಹ್ತಾ ಅವರಿಗೆ ಶ್ರದ್ಧಾಂಜಲಿ. ಜೀವನದುದ್ದಕ್ಕೂ ಅವರು ಹಾಸ್ಯ ಮತ್ತು ಲೇಖನದ ಸಾಂಗತ್ಯವನ್ನು ಬಿಡಲಿಲ್ಲ. ಅವರನ್ನು ಭೇಟಿಯಾಗುವ ಸುವವಕಾಶ ಸಾಕಷ್ಟು ಬಾರಿ ಸಿಕ್ಕಿದೆ. ಇತ್ತೀಚಿಗೆ ಪದ್ಮಶ್ರೀ ಪುರಸ್ಕಾರ ನೀಡುವ ಸಂದರ್ಭದಲ್ಲೂ ಭೇಟಿಯಾಗುವ ಅವಕಾಶ ದೊರೆಯಿತು. ಅವರ ಲೇಖನಗಳಲ್ಲಿ ಭಾರತದ ವಿವಿಧತೆಯಲ್ಲಿ ಏಕತೆಯ ಚಿತ್ರಣ ಕಾಣುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಹೇಳಿದ್ದಾರೆ.
सुप्रसिद्ध नाटककार और हास्य लेखक तारक मेहता जी को श्रद्धांजलि। उन्होंने जीवन भर व्यंग्य और कलम का साथ नहीं छोड़ा। pic.twitter.com/FRRpA3raYW
— Narendra Modi (@narendramodi) March 1, 2017
मुझे तारक मेहता जी से कई बार मिलने का सौभाग्य मिला। जब उन्हें पद्मश्री से सम्मानित किया गया, तब भी उनसे मिलने का अवसर मिला।
— Narendra Modi (@narendramodi) March 1, 2017
तारक मेहता जी के लेखन में भारत की विविधता में एकता की झलक दिखती है । टप्पू समेत कई किरदार लोगों के दिलों में बस गये।
— Narendra Modi (@narendramodi) March 1, 2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.