ನವದೆಹಲಿ: ‘ವತನ್ ಕೋ ಜಾನೋ’ ಅಭಿಯಾನದಡಿ ದೇಶದ ವಿವಿಧ ಭಾಗಗಳಿಗೆ ಪ್ರವಾಸಕೈಗೊಂಡಿರುವ ಜಮ್ಮು ಕಾಶ್ಮೀರದ ಸುಮಾರು 100 ಮಕ್ಕಳು ಮತ್ತು ಯುವಕರನ್ನು ನವದೆಹಲಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಭೇಟಿಯಾದರು.
ಜಮ್ಮು ಕಾಶ್ಮೀರದಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿ, ಕ್ರೀಡೆ ಸೌಕರ್ಯಗಳು, ಶಿಕ್ಷಣ, ಉದ್ಯೋಗವಕಾಶಗಳ ಬಗ್ಗೆ ಮತ್ತು ಪ್ರಧಾನಿಗಳ ದೈನಂದಿನ ಚಟುವಟಿಕೆಗಳ ಬಗ್ಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ ಯುವಕರು ಮತ್ತು ಮಕ್ಕಳು ಮೋದಿಯಿಂದ ಸಮರ್ಥ ಉತ್ತರ ಪಡೆದರು.
ದೇಶದ ಇತರ ಭಾಗ ಮತ್ತು ಕಾಶ್ಮೀರದ ನಡುವಿನ ಸಂಪರ್ಕವನ್ನು ಉತ್ತಮಪಡಿಸಲು, ಮೂಲಭೂತ ಸೌಕರ್ಯವನ್ನು ಅಭಿವೃದ್ಧಿ ಪಡಿಸಲು ಮತ್ತು ಕ್ರೀಡೆ ಮತ್ತು ಶಿಕ್ಷಣವನ್ನು ಉನ್ನತಮಟ್ಟಕ್ಕೆ ಏರಿಸಲು ಕೇಂದ್ರ ಕಾರ್ಯಪ್ರವೃತ್ತವಾಗಿದೆ ಎಂದು ಮೋದಿ ತಿಳಿಸಿದರು.
ಶ್ರಮವಹಿಸಿ ದುಡಿಯುವುದರಿಂದ ಬಳಲಿಕೆಯಾಗದು, ಕಾರ್ಯವನ್ನು ಸಮರ್ಪಕವಾಗಿ ನಿಭಾಯಿಸಿದರೆ ಹೆಚ್ಚಿನ ಸಂತೃಪ್ತಿ ನಮಗೆ ಸಿಗಲಿದೆ ಎಂದರು.
Had a great interaction with youth from Jammu and Kashmir who are touring different parts of India as a part of ‘Watan Ko Jaano’ initiative. pic.twitter.com/81RnT9jHb2
— Narendra Modi (@narendramodi) February 28, 2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.