ತಮಿಳುನಾಡು: ದೇಶೀಯ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಮಾ.1ರಿಂದ ರಾಜ್ಯದಲ್ಲಿ ವಿದೇಶಿ ತಂಪು ಪಾನೀಯಗಳಾದ ಪೆಪ್ಸಿ ಹಾಗೂ ಕೋಕಾಕೋಲಾ ಮಾರಾಟವನ್ನು ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದ ಜಲ್ಲಿಕಟ್ಟು ಕ್ರೀಡೆಯ ವಿರುದ್ಧ ಪೆಟಾ ದಂತಹ ವಿದೇಶಿ ಕಂಪನಿಗಳು ಸಮರ ಸಾರಿದ್ದು, ರಾಜ್ಯದ ಜನರನ್ನು ಕೆರಳಿಸಿದೆ. ಪರಿಣಾಮ ವ್ಯಾಪಾರಗಳ ಒಕ್ಕೂಟ ಕಿರುಕುಳ ಮಾರಾಟಗಾರರಿಗೂ ಈ ಕುರಿತು ಸೂಚನೆ ನೀಡಿದೆ ಎನ್ನಲಾಗಿದೆ.
ವರದಿ ಹೇಳುವಂತೆ ತಮಿಳುನಾಡಿನಲ್ಲಿ ಕಿರುಕುಳ (ರಿಟೇಲ್) ವ್ಯಾಪಾರವನ್ನು ನಿಯಂತ್ರಿಸುವ ಎರಡು ಪ್ರಮುಖ ಒಕ್ಕೂಟಗಳಿದ್ದು, ಅವು ತನ್ನ ಸದಸ್ಯರಿಗೆ ವಿದೇಶಿ ಉತ್ಪನ್ನಗಳನ್ನು ಮಾರದಂತೆ ಕೋರಿಕೊಂಡಿವೆ. ಸ್ವದೇಶಿ ಉತ್ಪನ್ನಗಳಾದ ಕಾಲಿ ಮಾರ್ಕ್, ಬೋವಂಟೋ ಮತ್ತು ಟೊರಿನೊಗಳ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆಯೂ ಹೇಳಿದೆ.
ಜಲ್ಲಿಕಟ್ಟು ಪ್ರತಿಭಟನೆ ನಂತರ, ಅನೇಕ ಯುವ ಸಮುದಾಯ ವಿದೇಶಿ ಕಂಪನಿಯ ಉತ್ಪನ್ನಗಳಾದ ಕೋಕಾಕೋಲಾ ಹಾಗೂ ಪೆಪ್ಸಿಯನ್ನು ವಿರೋಧಿಸುತ್ತಿರುವುದನ್ನು ಗಮನಿಸಿದೆವು ಎಂದು ತಮಿಳುನಾಡು ವಣಿಗರ ಸಂಗನಗಳಿನ್ ಪೆರಮೈಪ್ಪುದ (TNVSP) ಅಧ್ಯಕ್ಷ ಎ.ಎಂ.ವಿಕ್ರಮ ರಾಜಾ ತಿಳಿಸಿದ್ದಾರೆ.
ಅಂದಾಜು 6000 ವ್ಯಾಪಾರಿ ಒಕ್ಕೂಟಗಳು ಇದರ ಅಡಿಯಲ್ಲಿ ಬರುವುದಲ್ಲದೇ, 15 ಲಕ್ಷಕ್ಕಿಂತಲೂ ಹೆಚ್ಚು ಸದಸ್ಯರನ್ನು ರಾಜ್ಯದಾದ್ಯಂತ ಈ ಒಕ್ಕೂಟ ಹೊಂದಿದೆ.
ವಿದೇಶಿ ಕಂಪನಿ ಉತ್ಪನ್ನಗಳ ಮಾರಾಟ ಸ್ಥಗಿತ ಕುರಿತು ತಮ್ಮ ಗಮನಕ್ಕಿದೆ ಎಂದು ಚೈನೈನ ವ್ಯಾಪಾರಿಗಳು ಹೇಳಿದ್ದು, ಶ್ರೀ ಅಂಗಲಾಪರಮೇಶ್ವರಿ ಅಂಗಡಿಯ ಮಾಲಿಕ ಆರ್.ಕೆ.ಅಂಗಮುತ್ತು ಅವರು, ಒಕ್ಕೂಟದ ನಿರ್ಣಯಕ್ಕೆ ಬದ್ಧರಿರುವುದಾಗಿ ಹೇಳಿದ್ದಾರೆ.
ಪಾರಂಪರಿಕ ಕ್ರೀಡೆಯನ್ನು ಬಲವಾಗಿ ವಿರೋಧಿಸಿದ್ದ ವಿದೇಶಿ ಕಂಪನಿಗಳಿಗೆ ಪಾಠ ಕಲಿಸಲು ತಮಿಳರು ವಿದೇಶಿ ಉತ್ಪನ್ನಗಳ ಮಾರಾಟ ಸ್ಥಗಿತಕ್ಕೆ ಮೊರೆ ಹೋಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.