ನವದೆಹಲಿ: ವರ್ಷವಿಡೀ ಬಿಡುವಿಲ್ಲದೆ ಕೆಲಸದಲ್ಲಿ ನಿರತರಾಗಿರುವ ಬಾಲಿವುಡ್ನ ಪ್ರಸಿದ್ಧ ನಟ ಅಕ್ಷಯ ಕುಮಾರ್ ತಮ್ಮ ನಿರಂತರ ಕೆಲಸದಲ್ಲಿಯೂ ದೇಶಕ್ಕಾಗಿ ಕೊಡುಗೆ ನೀಡುವಲ್ಲಿ ಸಮಯ ಕೊಡುವುದನ್ನು ಮರೆತಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ.
ಅಕ್ಷಯ ಕುಮಾರ್ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ ಅವರನ್ನು ಭೇಟಿಮಾಡಿ, ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ್ದಾರೆ ಎನ್ನಲಾಗಿದೆ. ನಟ ಅಕ್ಷಯ ಕುಮಾರ್ ನೆರೆದಿದ್ದ ಮಾಧ್ಯಮಗಳ ಮಧ್ಯೆ ಕಾರ್ಯದರ್ಶಿಯವರ ಕಛೇರಿಯಿಂದ ಹೊರ ಬರುತ್ತಿರುವ ವೀಡಿಯೋ ದೃಶ್ಯವನ್ನು ಎಎನ್ಐ ಹಂಚಿಕೊಂಡಿದೆ.
ಹುತಾತ್ಮರುಗಳ ಕುಟುಂಬದವರಿಗೆ ಆರ್ಥಿಕ ನೆರವು ನೀಡಲು ಬಯಸುವವರಿಗೆ ಯಾವುದೇ ತೊಂದರೆಗಳಿಲ್ಲದಿರುವಂತಹ ಒಂದು ಅನುಕೂಲಕರ ವ್ಯವಸ್ಥೆಯೊಂದು ಜಾರಿಯಾಗಬೇಕೆಂದು ನಟ ಅಕ್ಷಯ ಕುಮಾರ್ ಬಯಸಿದ್ದಾರೆ ಎಂದು ಟಿಒಐ ವರದಿ ಮಾಡಿದೆ.
ಅಕ್ಷಯ ಕುಮಾರ್ ಮತ್ತು ಗೃಹ ಸಚಿವಾಲಯ ಒಟ್ಟಿಗೆ ಸೇರಿ ಒಂದು ವೆಬ್ ಅಪ್ಲಿಕೇಶನ್ನನ್ನು ಸಿದ್ಧಪಡಿಸಲು ಮುಂದಾಗಿದ್ದು, ನೆರವು ನೀಡಲು ಬಯಸುವವರು ಹುತಾತ್ಮ ಕುಟುಂಬದವರಿಗೆ ಸಂಬಂಧಿಸಿದ ಬ್ಯಾಂಕಿನ ಖಾತೆಗೆ ನೇರವಾಗಿ ಹಣವನ್ನು ಠೇವಣಿ ಮಾಡಬಹುದಾಗಿದೆ. ಗೃಹ ಸಚಿವಾಲಯದ ವೆಬ್ಸೈಟ್ನಲ್ಲಿ ಈ ಆ್ಯಪ್ಗೆ ಸಂಪರ್ಕ ಕಲ್ಪಿಸಲಾಗುವುದು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.