ನವದೆಹಲಿ: ರೈಸಿನಾ ಸಮ್ಮೇಳನದ ಎರಡನೇ ಆವೃತ್ತಿಯನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ೨೦೧೪ರ ಮೇ ತಿಂಗಳಲ್ಲಿ ಭಾರತದ ಜನರು ಹೊಸ ಯುಗಕ್ಕೆ ಕಾಲಿಟ್ಟರು ಎಂದು ಹೇಳಿದ್ದಾರೆ.
ಭಾರತೀಯರು ಬದಲಾವಣೆಯನ್ನು ಬಯಸಿದ ಕೇಂದ್ರ ಸರ್ಕಾರದ ಆದೇಶಕ್ಕೆ ಒಂದುಗೂಡಿ ಧ್ವನಿಗೂಡಿಸಿದರು. ನನ್ನ ಪ್ರತಿ ದಿನ ಕಲಸದ ‘ಪಟ್ಟಿ’ ಸುಧಾರಣೆ ಮತ್ತು ಭಾರತದ ರೂಪಾಂತರ, ಏಳಿಗೆ ಹಾಗೂ ಭಾರತೀಯರ ಭದ್ರತೆಯ ನಿರಂತರ ಅಭಿಯಾನದ ಮಾರ್ಗದರ್ಶಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತಕ್ಕೆ ವಿಶ್ವದ ಬೆಳವಣಿಗೆ ಎಷ್ಟು ಅಗತ್ಯವೋ ವಿಶ್ವಕ್ಕೆ ಭಾರತದ ನಿರಂತರ ಬೆಳವಣಿಗೆ ಅಷ್ಟೇ ಅಗತ್ಯವೆನಿಸಿದೆ. ದೇಶದಲ್ಲಿ ಬದಲಾವಣೆ ತರುವ ನಮ್ಮ ಬಯಕೆ ಬಾಹ್ಯ ಜಗತ್ತಿನೊಂದಿಗೆ ಒಂದು ಅಖಂಡ ಸಂಪರ್ಕವನ್ನು ಹೊಂದಿದೆ. ಅನೇಕ ಕಾರಣಗಳಿಗಾಗಿ ಮತ್ತು ಅನೇಕ ಹಂತಗಳಲ್ಲಿ ಈ ವಿಶ್ವ ಬದಲಾವಣೆಗಳ ಮೂಲಕ ಬೆಳೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.
ನನಗೆ ಸಬಕಾ ಸಾಥ್, ಸಬಕಾ ವಿಕಾಸ್ ಎಂಬುದು ಕೇವಲ ಭಾರತದ ಒಂದು ದೃಷ್ಟಿಕೋನ ಮಾತ್ರವಲ್ಲ. ಅದು ಇಡೀ ಪ್ರಪಂಚದ ಒಂದು ನಂಬಿಕೆ. ದಕ್ಷಿಣ ಏಷ್ಯಾದ ಜನರು ರಕ್ತ ಸಂಬಂಧಗಳನ್ನು ಹೊಂದಿದ್ದಾರೆ, ಇತಿಹಾಸ, ಸಂಸ್ಕೃತಿ ಮತ್ತು ಆಕಾಂಕ್ಷೆಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಭಾರತ ನೆರೆಯ ರಾಷ್ಟ್ರಗಳ ಜೊತೆ ಪಾಲುದಾರಿಕೆ ವಹಿಸಿದೆ. ದಕ್ಷಿಣ ಏಷ್ಯಾದ ರಾಷ್ಟ್ರಗಳ ಜೊತೆಗಿನ ಭಾರತದ ದೃಷ್ಟಿಕೋನ ಸಾಮರಸ್ಯ ಮತ್ತು ಶಾಂತಿಯುತ ಸಂಬಂಧಗಳ ಕುರಿತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತದ ಈ ದೃಷಿಕೋನ ನನ್ನ ಪ್ರಮಾಣವಚನ ಸ್ವೀಕಾರದ ಸಂದರ್ಭ ಪಾಕಿಸ್ಥಾನ ಸೇರಿದಂತೆ ಎಲ್ಲ ಸಾರ್ಕ್ ದೇಶಗಳ ನಾಯಕರನ್ನು ಆಮಂತ್ರಿಸಲು ಕಾರಣವಾಗಿದೆ. ಭಾರತ ಒಂಟಿಯಾಗಿ ಶಾಂತಿಯ ಪಥದಲ್ಲಿ ನಡೆಯಲು ಸಾಧ್ಯವಿಲ್ಲ. ಇದಕ್ಕೆ ಪಾಕ್ ಸೇರಿದಂತೆ ಇತರ ರಾಷ್ಟ್ರಗಳು ಕೂಡ ಈ ಪಥದಲ್ಲಿ ಪಯಣಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.