ದೆಹಲಿಯಲ್ಲಿ ಹತ್ಯಾಕಾಂಡಕ್ಕೆ ಕಾರಣನಾದ, ಪವಿತ್ರ ಯುದ್ಧದ ಹೆಸರಿನಲ್ಲಿ ಹಿಂದುತ್ವದ ವಿರುದ್ಧ ಭಾರತದಲ್ಲಿ ಸಮರ ಸಾರಿದ್ದ ಆಕ್ರಮಣಕಾರ ’ತೈಮುರ್ ಅಲಿ’ ಯ ಹೆಸರನ್ನು ತಮ್ಮ ಮಗುವಿಗೆ ಇಡುವ ಮೂಲಕ ಬಾಲಿವುಡ್ ನಟ ಸೈಫ್ ಅಲಿ ಖಾನ್-ಕರೀನಾ ದಂಪತಿಗಳು ಬಹುಚರ್ಚೆಗೆ ಗ್ರಾಸ ಒದಗಿಸಿದ್ದಾರೆ.
2016 ರ ಡಿ. 20 ರಂದು ಮುಂಬೈನಲ್ಲಿ ಸೈಫ್ ಅಲಿ ಖಾನ್- ಕರೀನಾ ದಂಪತಿಗೆ ಗಂಡು ಮಗು ಜನಿಸಿದೆ. ಈ ಕುರಿತು ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ, ಈ ಹೆಸರಿನ ಕುರಿತು ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ.
ಆಕ್ರಮಣಕಾರ ತೈಮೂರ್
ತೈಮೂರ್ ಎಂಬುದು ಅರೇಬಿಕ್ ಪದ. ತೈಮೂರ್ ಎಂದರೆ ’ಕಬ್ಬಿಣ’ ಅಥವಾ ’ ಆಕ್ರಮಣ’ ಎಂದರ್ಥ. 14 ನೇ ಶತಮಾನದಲ್ಲಿ ಟರ್ಕೊ-ಮಂಗೋಲ್ ಆಕ್ರಮಣಕಾರ ತೈಮುರ್, ಮುಸ್ಲಿಂ ಆಡಳಿತವಿರುವ ಮಧ್ಯ ಏಷಿಯಾದ ಭಾಗ ಮತ್ತು ಭಾರತವನ್ನು ತನ್ನ ನಿಯಂತ್ರಣದಲ್ಲಿ ತೆಗೆದುಕೊಳ್ಳಲು ಆಕ್ರಮಣ ಮಾಡಿದವ. ತೈಮುರಿದ್ ಸಾಮ್ರಾಜ್ಯದ ಸಂಸ್ಥಾಪಕ ತೈಮೂರ್. 1857 ರವರೆಗೂ ಈ ಸಾಮ್ರಾಜ್ಯ ಅಸ್ತಿತ್ವದಲ್ಲಿತ್ತು.
ತೈಮೂರ್ನ ಸೇನೆ ಏನಿಲ್ಲವೆಂದರೂ 17 ಲಕ್ಷ ಜನರನ್ನು ಕೊಂದು ಹಾಕಿದೆ.
ಭಾರತದ ವಿಷಯಕ್ಕೆ ಬಂದಾಗ, ಹಿಂದು ಧರ್ಮದ ವಿರುದ್ಧ ಪವಿತ್ರವಾದ ಯುದ್ಧ ಎನ್ನುತ್ತ ಅಸಂಖ್ಯ ಜನರನ್ನು ಹತ್ಯೆ ಮಾಡಿದ ಮಹಾನುಭಾವ ತೈಮೂರ್.
ತೈಮೂರ್ನ ಆತ್ಮಚರಿತ್ರೆಯ ಪುಟಗಳನ್ನು (Chapter No.9: Timur’s Account of his invasion of india and sack of delhi)) ತೆರೆದಾಗ, ಅವನೇ ತನ್ನ ಆಕ್ರಮಣಗಳ ಕುರಿತು ಈ ಕೆಳಗಿನಂತೆ ಹೇಳಿಕೊಂಡಿದ್ದಾನೆ…
‘ಅನೀತಿ ವಿರುದ್ಧ ಆಕ್ರಮಣ ಮಾಡುವ ಕುರಿತು ಇಸವಿ 1398 ರಲ್ಲಿ ನನ್ನ ಮನದಲ್ಲಿ ವಿಚಾರವೊಂದು ಮೂಡಿತು. ಇದಕ್ಕೆ ಸಂಬಂಧಿಸಿದಂತೆ ಒಂದು ನಿಯಮ ರೂಪಿಸಬೇಕೆಂದುಕೊಂಡೆ. ಆದರೆ, ಚೈನಾದ ಅನೀತಿ ವಿರುದ್ಧ ದಂಡಯಾತ್ರೆಯೋ ಅಥವಾ ಭಾರತದ ಅನೀತಿ ಹಾಗೂ ಬಹುದೇವತಾರಾಧನೆ ವಿರುದ್ಧವೋ ಎಂಬ ಕುರಿತು ನನ್ನಲ್ಲೇ ದ್ವಂದ್ವವಿತ್ತು. ಈ ಕುರಿತು ನನಗೆ ಕುರಾನ್ನ ಪದ್ಯದಲ್ಲಿ ಪರಿಹಾರ ಸಿಕ್ಕಿತು. ’ಓ ಪ್ರವಾದಿ. ಅನೀತಿ ಹಾಗೂ ನಾಸ್ತಿಕರ ಮೇಲೆ ಯುದ್ಧ ಮಾಡು. ಮತ್ತು ಅಂಥವರನ್ನು ಗಂಭೀರವಾಗಿ ಪರಿಗಣಿಸು’ ಎಂದಿದೆ.
ಹಿಂದುಸ್ಥಾನದವರು ಅನೀತಿಕೋರರು ಹಾಗೂ ನಾಸ್ತಿಕರು ಎಂದು ನನ್ನ ಮೇಲಧಿಕಾರಿಗಳು ಹೇಳಿದರು. ದೇವರ ಆದೇಶಕ್ಕೆ ವಿಧೇಯನಾಗಿ, ನಾನು ಆಕ್ರಮಣ ಮಾಡುವುದಾಗಿ ನಿಶ್ಚಯಿಸಿದೆ.
ಸೈನಿಕರಿಗೆ ಹಾಗೂ ಸೇನಾ ನಾಯಕರಿಗೆ ಹಾಜರಾಗಲು ಆದೇಶಿಸಿದೆ. ಅವರೆಲ್ಲರೂ ಒಂದೆಡೆ ಸೇರಿದಾಗ ನಾನು ನನ್ನ ಅಸೆಂಬಿಯಲ್ಲಿ, ಹಿಂದುಸ್ಥಾನವನ್ನು ಆಕ್ರಮಿಸಲಾ ಅಥವಾ ಚೀನಾ ಮೇಲೆ ಆಕ್ರಮಣ ಮಾಡುವುದಾ ಎಂದು ಪ್ರಶ್ನಿಸಿದೆ. ಅವರು ಹಿಂದುಸ್ತಾನವನ್ನು ಎಂದು ಹೇಳಿದರು’. ನಾನು ಅದನ್ನೇ ಮಾಡಿದೆ. ಅವರು ನನಗೆ ಶುಭ ಕೋರಿದರು.
ಇದು ತೈಮೂರ್ ತಾನೇ ಹೇಳಿಕೊಂಡ ಆಕ್ರಮಣದ ಕಾರಣಗಳು.
ದೆಹಲಿಯನ್ನು ತೈಮೂರನ ಸೈನ್ಯ ವಶಪಡಿಸಿಕೊಂಡ ನಂತರ, ಅಲ್ಲಿನ ನಾಗರಿಕರು ತೈಮೂರನ ಹತ್ಯಾಕಾಂಡದ ವಿರುದ್ಧ ದಂಗೆ ಎದ್ದರು. ದಂಗೆ ಎದ್ದ ಮೂರು ದಿನಗಳಲ್ಲಿ ನಗರವು ನಾಗರಿಕರ ಕೊಳೆತ ಶವಗಳಿಂದ ತುಂಬಿ ಹೋಯಿತು. ಅಮಾನುಷವಾಗಿ ಹತ್ಯೆಯಾದ ದೆಹಲಿ ಜನರ ದೇಹಗಳು ಪಕ್ಷಿಗಳಿಗೆ ಆಹಾರವಾಗಿದ್ದವು. ಅಂದಿನಿಂದ ಇಂದಿನವರೆಗೂ ಅಲ್ಲಿ ಗೊಂದಲಮಯ ವಾತಾವರಣವೇ ಮುಂದುವರೆದಿದೆ. ಶತಮಾನಗಳು ಉರುಳಿದರೂ ಅದರಿಂದ ಹೊರಬರಲಾದ ಸ್ಥಿತಿ ನಿರ್ಮಾಣವಾಗಿದೆ. ಲೂಟಿಗೊಳಗಾದ ದೆಹಲಿಯಲ್ಲಿ ಅವಶೇಷಗಳು ಮಾತ್ರ ಉಳಿಯುವಂತಾಯಿತು.
ದೆಹಲಿ ಆಕ್ರಮಣಕ್ಕೂ ಮುನ್ನ ತೈಮೂರನು 1 ಲಕ್ಷಕ್ಕೂ ಅಧಿಕ ಜನರನ್ನು ಹತ್ಯೆಗೈದಿದ್ದಾನೆ.
1400 ರಲ್ಲಿ ಕ್ರಿಶ್ಚಿಯನ್ ದೇಶಗಳಾದ ಅರ್ಮಿನಿಯಾ ಮತ್ತು ಜಾರ್ಜಿಯಾ ಮೇಲೂ ಆಕ್ರಮಣ ಮಾಡುತ್ತಾನೆ. 60 ಸಾವಿರಕ್ಕೂ ಹೆಚ್ಚು ಜನರನ್ನು ತನ್ನ ಗುಲಾಮರನ್ನಾಗಿಸಿಕೊಳ್ಳುತ್ತಾನೆ. ಅಲ್ಲದೇ ಅನೇಕ ಜಿಲ್ಲೆಗಳನ್ನು ನಿರ್ಜನವಾಗಿಸುತ್ತಾನೆ. ಹೀಗೇ ಸಿರಿಯಾ, ಬಾಗ್ದಾದ್ ಮೇಲೆಯೂ ದಾಳಿ ಮಾಡುವ ತೈಮೂರ್ ಹತ್ಯಾಕಾಂಡಗಳ ಸರಣಿಯನ್ನೇ ತನ್ನ ಜೀವಮಾನದ ಸಾಧನೆ ಎನ್ನುವಂತೆ ವರ್ತಿಸುತ್ತಾನೆ.
ತೈಮೂರ್ ಪರ್ಷಿಯನ್ ನಗರದಲ್ಲಿ (1336) ಜನಿಸಿದ. ಇದೀಗ ಆಧುನಿಕ ಉಜೆಕಿಸ್ತಾನ್ದಲ್ಲಿರುವ ಈ ನಗರ ಶಹ್ರಿಸಾಬಾಜ್ ಎಂದು ಪ್ರಚಲಿತದಲ್ಲಿದೆ.
ತೈಮೂರ್ ಒಬ್ಬ ಸೇನಾನಾಯಕನಾಗಿದ್ದ. ಇರಾಕ್, ಇರಾನ್, ಅಪಘಾನಿಸ್ಥಾನ್, ಪಾಕಿಸ್ಥಾನ, ಅಝರ್ಬೈಜಾನ್, ಜಾರ್ಜಿಯಾ, ಉಝಿಕಿಸ್ತಾನ್, ಟರ್ಕ್ಮೆನಿಸ್ತಾನ್, ತಜಕಿಸ್ತಾನ್, ತುರ್ಕಿ ಮತ್ತು ಸಿರಿಯಾದ ಬಹುಭಾಗಗಳು ಮತ್ತು ಭಾರತದ ವಾಯುವ್ಯ ಭಾಗವನ್ನು (ದೆಹಲಿ) ಅವನು ವಶಪಡಿಸಿಕೊಂಡ ಪ್ರದೇಶಗಳಲ್ಲಿ ಪ್ರಮುಖವಾದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.