ಆಗ್ರಾ: ಹೆಚ್ಚಿನ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ಮೇಲಿನ ಪರಿಣಮಗಳ ಬಗ್ಗೆ ಪಕ್ಷ ಎಚ್ಚೆತ್ತುಕೊಂಡಿದೆ. ಬಿಜೆಪಿಯ ಸುಮಾರು 200 ಪೂರ್ಣ ಪ್ರಮಾಣದ ಕಾರ್ಯಕರ್ತರು ಆಗ್ರಾ ಜಿಲ್ಲೆಯ ೯ ಚುನಾವಣಾ ಕ್ಷೇತ್ರಗಳಲ್ಲಿ ಕೇಂದ್ರದ ನೀತಿಯ ಪರಿಣಾಮಗಳ ಬಗ್ಗೆ ಆರ್ವಜನಿಕ ಸಮೀಕ್ಷೆ ನಡೆಸಲು ನಿರ್ಧರಿಸಿವೆ.
ಬಿಜೆಪಿ ಪಕ್ಷದ ಮಾಜಿ ಜಿಲ್ಲಾ ಮಾಧ್ಯಮ ಉಸ್ತುವಾರಿ ಕೆ.ಕೆ. ಭಟ್ಟಾಚಾರ್ಯ ನೇತೃತ್ವದಲ್ಲಿ 20 ಸದಸ್ಯರ 10 ತಂಡಗಳು ಡಿ.26ರಿಂದ ಸಮೀಕ್ಷೆ ಆರಂಭಿಸಲಿವೆ. ಬಿಜೆಪಿಯ ಸದಸ್ಯರು ಸುಮಾರು 1.5 ಲಕ್ಷ ಜನರ ಪ್ರತಿಕ್ರಿಯೆ ಪಡೆಲಿದ್ದಾರೆ. ಮುಂದಿನ ಕೆಲವು ದಿನದಲ್ಲಿ ಸಮೀಕ್ಷೆಯ ಪ್ರಶ್ನಾವಳಿಯ ಕರಡನ್ನು ತಯಾರಿಸಲಾಗುವುದು. ಸಮೀಕ್ಷೆಯ ಮಾಹಿತಿಯನ್ನು ಜನವರಿ 10ರ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಹಾಗೂ ಪಕ್ಷ ಅನಾರ್ಣಯೀಕರಣ ಕುರಿತ ಪ್ರತಿಕ್ರಿಯೆಗಳನ್ನು ವಿವಿಧ ಮೂಲಗಳಿಂದ ಪಡೆಯುತ್ತಿವೆ. ಆದರೆ ವಿರೋಧ ಪಕ್ಷಗಳು ಕೆಲವು ಅಧಾರರಹಿತ ವದಂತಿಗಳನ್ನು ಹುಟ್ಟಿಸುತ್ತಿದ್ದು, ಅನಾಣ್ಯೀಕರಣ ನಿರ್ಧಾರದಿಂದ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ. ಆದದರಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.