ನವದೆಹಲಿ: ಪ್ರಧಾನಿ ನರೆಂದ್ರ ಮೋದಿ ಅವರು ರೂ. 500 ಮತ್ತು ರೂ.1000 ನೋಟು ರದ್ದು ಪಡಿಸಿದ್ದು, ಭಾರತವನ್ನು ಭ್ರಷ್ಟಮುಕ್ತವನ್ನಾಗಿ ಮಾಡುವುದಾಗಿ ಹೇಳಿದ್ದಾರೆ.
ಅವರ ಈ ನಿರ್ಧಾರದ ಬಗ್ಗೆ ಚಲನಚಿತ್ರದ್ಯೋಮಿಗಳಾದ ಕರನ್ ಜೋಹರ್, ರಜನಿಕಾಂತ್, ಅಜಯ್ ದೇವಗನ್, ಕಮಲ್ ಹಾಸನ್, ನಾಗಾರ್ಜುನ್, ಕ್ರಿಕೆಟರ್ ಅನಿಲ ಕುಂಬ್ಳೆ ಹಾಗೂ ಇನ್ನಿತರರು ಪ್ರಶಂಶಿಸಿದ್ದಾರೆ. ಹೀಗೆ ಪ್ರಶಂಸೆಗಳ ಮಹಾಪೂರವೇ ಮೋದಿಗೆ ಸಂದಿದೆ.
ರಜನಿಕಾಂತ್ ಅವರು ಟ್ವಿಟರ್ನ ಮೂಲಕ ಹ್ಯಾಟ್ಸ್ ಆಫ್ ಮೋದಿ ಜೀ ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು ಅಮೇರಿಕಾದಲ್ಲಿ ವೋಟುಗಳ ಎಣಿಕೆ ನಡೆದರೆ ಭಾರತದಲ್ಲಿ ನೋಟುಗಳನ್ನು ಎಣಿಕೆ ಮಾಡಲಾಗುತ್ತಿದೆ. ಇಂದು ರಾತ್ರಿ ಲೈಟ್ ಉರಿಯುತ್ತಿರುವ ಮನೆಗಳು ಕಪ್ಪು ಹಣವನ್ನು ಎಣಿಸುತ್ತಿರುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.
ಟ್ವಿಟರ್ ಮೂಲಕ ಸೂಫಿ ಹಾಡುಗಾರ ಕೈಲಾಶ್ ಖೇರ್ ‘ಇಂದು ಇತಿಹಾಸ ಬರೆಯಲ್ಪಡುವ ದಿನ. ಭಾರತ ಅಭಿವೃದ್ಧಿ ಸಾಧಿಸುತ್ತದೆ’ ಎಂದು ಹೇಳಿದ್ದಾರೆ.
ಭ್ರಷ್ಟಮುಕ್ತ ಭಾರತದ ಗುರಿಯೊಂದಿಗೆ ಭ್ರಷ್ಟತೆ ನಡೆಯದಂತೆ ಮಾಡುತ್ತೇನೆ. ಕಪ್ಪುಹಣವನ್ನು ನಿರ್ಮೂಲನೆ ಮಾಡುವುದಾಗಿ ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.