ನವದೆಹಲಿ: ಪರಿಸರ ಮತ್ತು ಅರಣ್ಯ ಸಚಿವಾಲಯದ ಕಾರ್ಯದರ್ಶಿ ಎ.ಎನ್. ಝಾ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶಗಳು (ಎನ್ಸಿಆರ್)ಗಳ ಪರಿಸರ ಕಾರ್ಯದರ್ಶಿಗಳು ದೆಹಲಿ-ಎನ್ಸಿಆರ್ಗಳಲ್ಲಿಯ ಮಾಲಿನ್ಯ ಅಪಾಯದ ಬಗ್ಗೆ ಚರ್ಚೆ ನಡೆಸಿದ್ದಾರೆ.
ವೈದ್ಯಕೀಯ ತಜ್ಞರು ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಮಾಲಿನ್ಯದ ಮಟ್ಟವನ್ನು ಗುರುತಿಸಿದ್ದು, ಇದು ಜನರ ಪ್ರಾಣಕ್ಕೆ ಅಪಾಯಕರ ಎಂದು ತಿಳಿಸಿದ್ದಾರೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಅನಿಲ್ ಮಾಧವ್ ದಾವೆ ಅವರು ೪ ಎನ್ಸಿಆರ್ ರಾಜ್ಯಗಳಾದ ದೆಹಲಿ, ಯುಪಿ, ಹರ್ಯಾಣ ಮತ್ತು ರಾಜಸ್ಥಾನದ ಪರಿಸರ ಕಾರ್ಯದರ್ಶಿಗಳಿಗೆ ಸಮನ್ಸ್ ಜಾರಿಗೊಳಿಸಿ ಶೀಘ್ರದಲ್ಲೇ ಪರಿಆರ ಕಂಡು ಹಿಡಿಯುವಂತೆ ಆದೇಶಿಸಿದ್ದಾರೆ.
ಮಾಲಿನ್ಯ ಪರಿಸ್ಥಿತಿ ಅಪಾಯಕಾರಿ ಮಟ್ಟದಲ್ಲಿದೆ ಎನ್ನಲಾಗಿದ್ದು, ಸಭೆಯಲ್ಲಿ ದೆಹಲಿ ಸುತ್ತಮುತ್ತ ಹಾಗೂ ಇತರ ಎನ್ಸಿಆರ್ ರಾಜ್ಯಗಳಲ್ಲಿ ಇಟ್ಟಿಗೆ ಪರಿಶೋಧನೆ ಕಾರ್ಯ ಮುಚ್ಚಲು ನಿರ್ಧರಿಸಲಾಗಿದೆ. ದೆಹಲಿ ಪೊಲೀಸರು ಮಾಲಿನ್ಯ ತಡೆಗಟ್ಟಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ ಬಗ್ಗೆ ಅವ್ನೇಶಿಸಲು ನಿದೇಶಿಸಲು ರಾಜ್ಯಗಳು ಒಪ್ಪಿಕೊಂಡಿವೆ.
ಅಲ್ಲದೇ ಬದಾರ್ಪುರ್ ಸ್ಥಾವರದಿಂದ ಹೊರಸೂಸುವ ಹೊಗೆ ನಿಯಂತ್ರಿಸುವ ಮೂಲಕ ಮಾಲಿನ್ಯ ನಿಯಂತ್ರಿಸಲು ಮತ್ತು ನಗರಕ್ಕೆ ಪ್ರವೇಶಿಸುವ ಟ್ರಕ್ಗಳಿಂದ ಸಂಗ್ರಹಿಸಲಾಗುತ್ತಿರುವ ದೆಹಲಿ ಸರ್ಕಾರದ ಪರಿಸರ ತೆರಿಗೆ ನಿಧಿಯನ್ನು ಮಾಲಿನ್ಯ ನಿಯಂತ್ರಣಕ್ಕೆ ಬಳಸುವಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ.
ರಸ್ತೆ ನಿರ್ಮಾಣ ಸಂಸ್ಥೆಗಳು ಬಳಸುವ ಡಾಂಬರಿನ ಗುಣಮಟ್ಟವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಿಕಟ ಮೇಲ್ವಿಚಾರಣೆ ನಡೆಸುವ ಬಗ್ಗೆ ನಿರ್ಧರಿಸಲಾಗಿದೆ. ಡೀಸೆಲ್ ಜನರೇಟರ್ಗಳ ಬಳಕೆ ಬಗ್ಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.