ರಾಯ್ಪುರ್: ಜನಸಂಘ ಸಿದ್ಧಾಂತದ ಪ್ರತಿಪಾದಕರಾದ ಪಂ. ದೀನ್ದಯಾಳ್ ಉಪಾಧ್ಯಾಯ್ ಅವರ ಪ್ರತಿಮೆಯನ್ನು ಛತ್ತೀಸ್ಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅನಾವರಣಗೊಳಿಸಿದ್ದಾರೆ.
ರಾಜ್ಯದ 16ನೇ ಸ್ಥಾಪನಾ ದಿನದ ಅಂಗವವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್ಗಢಕ್ಕೆ ಭೇಟಿ ನೀಡಿದ್ದು, ಛತ್ತೀಸ್ಗಢದ ನೂತನ ರಾಜಧಾನಿಯಾಗಲಿರುವ ನಯಾ ರಾಯ್ಪುರ್ನ 320 ಹೆಕ್ಟೇರ್ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾದ ಜಂಗಲ್ ಸಫಾರಿ ಪಾರ್ಕ್ನ್ನು ಕೂಡ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಬಡವರ ಸಬಲೀಕರಣಕ್ಕೆ ಒತ್ತು ನೀಡಿದರಲ್ಲದೇ ನುರಿತ ಯುವಕರು ತಾವು ಬಡತನದಿಂದ ಹೊರಬಂದು ದೇಶದ ಅಭಿವೃದ್ಧಿಗೆ ಮುಂದಾಗಲು ಸಾಧ್ಯವಿದೆ. ಬಡ ಯುವಕರು ಸಾಕಷ್ಟು ಅವಕಾಶಗಳು, ತರಬೇತಿ, ಸೌಲಭ್ಯ, ಕೌಶಲ್ಯ ಮತ್ತು ಉಪಕರಣಗಳ ಸಹಾಯದಿಂದ ಬಡತನದಿಂದ ತಮ್ಮನ್ನು ಮಾತ್ರವಲ್ಲದೇ ಇತರರನ್ನೂ ಹೊರಗೆಳೆಯಬಹುದು ಎಂದು ಹೇಳಿದ್ದಾರೆ.
ಕೌಶಲ್ಯ ಮತ್ತು ‘ಮೇಕ್ ಇನ್ ಇಂಡಿಯಾ’ ಜೊತೆ ಸಂಪರ್ಕ ಕೊಂಡಿ ಕಲ್ಪಿಸಿದ ಅವರು, ನೈಪುಣ್ಯ ಹೊಂದಿದ ಜನರು ದೇಶದ ಆರ್ಥಿಕತೆ ಹೆಚ್ಚಿಸುವಲ್ಲಿ ಸಹಾಯಕವಾಗಲಿದ್ದಾರೆ. ಬಡತನದ ನಿರ್ಮೂಲನೆ ನಮ್ಮ ಸರ್ಕಾರ ಒತ್ತು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.
ಪರಿಸರ ಪ್ರವಾಸೋದ್ಯಮದ ಸಾಮರ್ಥ್ಯ ಹೊಂದಿದ ಛತ್ತೀಸ್ಗಢದಂತಹ ರಾಜ್ಯಗಳು ಅಭಿವೃದ್ಧಿಗೆ ಕಡಿಮೆ ಬಂಡವಾಳ ಹೂಡುವ ಮೂಲಕ ಉದ್ಯೋಗ ಸೃಷ್ಟಿ ಮಾಡಬಹುದು ಎಂದು ಮೋದಿ ಹೇಳಿದ್ದಾರೆ.
ಅವರು ರಾಯ್ಪುರ್ ಮತ್ತು ನಯಾ ರಾಯ್ಪುರ್ ನಡುವೆ ಸಾರ್ವಜನಿಕ ಸಾರಿಗೆ ಸೇವೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಬಿಆರ್ಟಿಎಸ್ ವ್ಯವಸ್ಥೆಯನ್ನು ರಾಜ್ಯಕ್ಕೆ ಸಮರ್ಪಿಸಿದರು.
ನಯಾ ರಾಯ್ಪುರ್ ರೈಲು ನಿಲ್ದಾಣ ಹಾಗೂ ಕ್ಯಾಪಿಟೋಲ್ ಕಾಂಪ್ಲೆಕ್ಸ್ ನಡುವೆ ನಿರ್ಮಿಸಕಾದ ಎರಡು ಕಿಲೋಮೀಟರ್ ಉದ್ದದ ‘ಏಕಾತ್ಮ ಪಥ್’ನ್ನು ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಹಸ್ತಾಂತರಿಸಿದರು.
ಪ್ರಧಾನಿ ಮೋದಿ ಅವರು ಛತ್ತೀಗಢದ 16ನೇ ಸ್ಥಾಪನಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.