ಆಲ್ಜಿಯರ್ಸ್: ಭಾರತ ಮತ್ತು ಪಾಕಿಸ್ಥಾನದ ನಡುವೆ ಗಡಿಯಲ್ಲಿ ಆತಂಕದ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದು, ಭಯೋತ್ಪಾದನೆಗೆ ಪಾಕಿಸ್ಥಾನದ ನಿರಂತರ ಬೆಂಬಲದ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಆಲ್ಜೀರಿಯಾ ಹೇಳಿದೆ.
ಇದೇ ವೇಳೆ ಎಲ್ಲ ರೀತಿಯಲ್ಲೂ ಭಯೋತ್ಪಾದನೆಯ ನಿರ್ಮೂಲನವಾಗಬೇಕು ಎಂದು ಅದು ಹೇಳಿದೆ.
ಆಲ್ಜೀರಿಯಾ ಹಾಗೂ ಹಂಗೇರಿ ರಾಷ್ಟ್ರಗಳ 5 ದಿನಗಳ ಪ್ರವಾಸದ ಭಾಗವಾಗಿ ಭಾರತದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಆಲ್ಜೀರಿಯಾಗೆ ಭೇಟಿ ನೀಡಿದ್ದು, ಈ ಸಂದರ್ಭ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಜಮ್ಮು-ಕಾಶ್ಮೀರದ ವೊಚಾರದಲ್ಲಿ ಭಾರತದ ನಿಲುವಿಗೆ ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಆಲ್ಜೀರಿಯಾ ಪ್ರಧಾನಿ ಅಬ್ದೆಲ್ಮಲಿಕ್ ಸೆಲ್ಲಲ್ ಹೇಳಿದ್ದಾರೆ.
ದೆಹಲಿಯು ಎಂದಿಗೂ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದ್ದು, ಗಡಿ ರಾಜ್ಯಗಳಲ್ಲಿ ಪಾಕಿಸ್ಥಾನದ ಗಡಿ ಉಲ್ಲಂಘನೆಯನ್ನು ವಿರೋಧಿಸುತ್ತ ಬಂದಿದೆ.
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಎರಡು ರಾಷ್ಟ್ರಗಳ ಪ್ರವಾಸದ ವೇಳೆ ಭಯೋತ್ಪಾದನೆ ಸಮಸ್ಯೆ ಕುರಿತು ಚರ್ಚಿಸಲಾಗಿದ್ದು, ಭಯೋತ್ಪಾದನೆ ಇಡೀ ವಿಶ್ವಕ್ಕೆ ಒಂದು ಖಾಯಿಲೆಯಾಗಿದೆ. ಭಯೋತ್ಪಾದನೆಯ ಎಲ್ಲ ಮಾದರಿಗಳ ನೀರ್ಮೂಲನೆ ಅಗತ್ಯ ಎಂದು ಈ ವೇಳೆ ಸ್ಪಷ್ಟಪಡಿಸಲಾಗಿದೆ.
ಈ ವೇಳೆ ಭಾರತ ಮತ್ತು ಆಲ್ಜೀರಿಯಾ ನಡುವೆ ಭಯೋತ್ಪಾದನೆ ವಿರೋಧಿ ಸಹಕಾರದ ಬಗ್ಗೆ ಚರ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಭಾರತದ ರಸಗೊಬ್ಬರ ಮತ್ತು ರಾಸಾಯನಿಕಗಳ ರಾಜ್ಯ ಸಚಿವ ಮನ್ಸುಖ್-ಅಲ್-ಮಾಂಡವಿಯಾ ಹಾಗೂ ಆಲ್ಜೀರಿಯಾದ ಗಣಿ ಮತ್ತು ಕೈಗಾರಿಕೆ ಸಚಿವ ಅಬ್ದೆಸ್ಸಲೆಮ್ ಬೌಶೊರೆಬ್ ಸಭೆ ನಡೆಸಿ ರಸಗೊಬ್ಬರ ಸ್ಥಾವರ ಜಂಟಿ ನಿರ್ಮಾಣದ ಕುರಿತು ಒಪ್ಪಂದಕ್ಕೆ ಮುಂದಾಗಿದ್ದಾರೆ.
ಹಂಗೇರಿ ಜೊತೆ ನೀರಾವರಿ ನಿರ್ವಹಣೆ ಒಪ್ಪಂದವನ್ನು ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.