ನವದೆಹಲಿ: ಚೀನಾ ಬೆಂಬಲದ ಮೇಲೆ ಅವಲಂಬಿತವಾಗಿರುವ ಅನರ್ಹ ಪಾಕಿಸ್ಥಾನ, ಸರ್ಜಿಕಲ್ ಪ್ರಿಕೆಯ ಅರ್ಥ ಮಾಡುತ್ತದೆ. ಆದರೆ ಜನರ ಶಾಂತಿಯುತ ಪ್ರತಿಭಟನೆಯಲ್ಲ ಎಂದು ವಿಶ್ವ ಬಲೂಚ್ ಮಹಿಳಾ ವೇದಿಕೆಯ ಅಧ್ಯಕ್ಷೆ ಹಾಗೂ ಬಲೂಚ್ ರಾಷ್ಟ್ರೀಯ ನಾಯಕಿ ನಯೀಲಾ ಕಾದ್ರಿ ಬಲೂಚ್ ಹೇಳಿದ್ದಾರೆ.
ಮಂಗಳವಾರ ಭಾರತಕ್ಕೆ ಆಗಮಿಸಿದ್ದ ನಯೀಲಾ ಬಲೂಚ್, ಪಾಕಿಸ್ಥಾನ ಶಾಂತಿಯುತ ಪ್ರತಿಭಟನೆಗಳಿಂದ ಸಮಾಧಾನವಾಗದು. ಪಾಕ್ಗೆ ಸರ್ಜಿಕಲ್ ಪ್ರಕ್ರಿಯೆ ಅಗತ್ಯವಿದೆ. ಪಾಕ್ ಆಡಳಿತ ನಡೆಸುವ ಜನರಲ್ಗಳ ಗುಂಪು ಶಾಂತಿಯುತ ವಿಷಗಳನ್ನು ಕೇಳಲು ಇಚ್ಛಿಸುವುದಿಲ್ಲ. ಅದು ಪ್ರಜಾಪ್ರಭುತ್ವ, ಜನರ ಅಭಿಪ್ರಾಯ ಮತ್ತು ಹಕ್ಕುಗಳನ್ನು ನಂಬುದಿಲ್ಲ ಎಂದು ಅವರು ಹೇಳಿದ್ದಾರೆ.
ಬಲೂಚಿಸ್ಥಾನದಿಂದ ತನ್ನ ಸೇನಾಪಡೆಗಳನ್ನು ವಾಪಸ್ ಕರೆಯುವಂತೆ ನವದೆಹಲಿಯ ಪಾಕ್ ಹೈ ಕಮಿಷನ್ ಎದುರು ಪ್ರತಿಭಟನೆ ನಡೆಸಿದ್ದರು ಅದರ ಕಿವಿಗಳು ಇನ್ನೂ ತೆರೆದಿಲ್ಲ. ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್-ಬಾಲ್ಟಿಸ್ಥಾನ್ಗಳಲ್ಲಿ ತನ್ನ ಭಯೋತ್ಪಾದಕ ನೆಲೆಯನ್ನು ಸ್ಥಾಪಿಸಿದೆ. ಅದು ಕಳೆದ ೩೦-೪೦ ವರ್ಷಗಳಿಂದ ಸಮರ ನಡೆಸುತ್ತಲೇ ಬಂದಿದೆ. ಈ ಪ್ರತಿಭಟನೆ ಯಶಸ್ವಿಯಾಗಿ ಪಾಕ್ ತನ್ನ ದುಷ್ಕೃತ್ಯಗಳನ್ನು ಅಂತ್ಯಗೊಳಿಸಲಿದೆ ಎಂದು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.