ಭುವನೇಶ್ವರ: ಮೃತರನ್ನು ಎಲ್ಲ ರೀತಿಯ ಆರೋಗ್ಯ ವ್ಯವಸ್ಥೆಗಳೊಂದಿಗೆ ಘನತೆ ಮತ್ತು ಗೌರವದಿಂದ ಕಾಣುವಂತೆ ಒಡಿಸಾ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಮೃತರ ಹೇಣವನ್ನು ಎಲ್ಲ ರೀತಿಯ ಘನತೆ, ಗೌರದಿಂದ ಕಾಣಬೇಕು. ಮೃತರ ದೇಹದ ಮೆಡಿಕೋ ಲೀಗಲ್ ಕೇಸ್ (ಎಂಎಲ್ಸಿ) ಹೊಂದಿದಲ್ಲಿ ಅಥವಾ ಎಂಎಲ್ಸಿ ರಹಿವಾಗಿದ್ದಲ್ಲಿ, ವಾರಿಸುದಾರರು ಇದ್ದಲ್ಲಿ ಅಥವಾ ಇಲ್ಲದಿದ್ದಲ್ಲಿ ಮೃತ ದೇಹವನ್ನು ಹೆಗಲ ಮೇಲೆ ಹೊರುವ ಇಲ್ಲವೇ ಸ್ಟ್ರೆಚರ್, ಇತರ ಸಾಧನದ ಮೂಲಕ ಘನತೆ, ಗೌರವದೊಂದಿಗೆ ಸಾಗಿಸಬೇಕು.
ಇದನ್ನು ಎಲ್ಲ ರೀತಿಯ ವಿಧಿ-ವಿಧಾನಗಳು ಪೂರ್ಣಗೊಳ್ಳುವ ತನಕ ನಿಗದಿತ ಸ್ಥಳದಲ್ಲಿ ಸೂಕ್ತವಾಗಿ ಇಡಬೇಕು ಎಂದು ಒಡಿಸಾ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಅಧಿಸೂಚನೆ ತಿಳಿಸಿದೆ.
ಗ್ರಾಮೀಣ ಪ್ರದೇಶದ ಪೊಲೀಸ್ ಠಾಣೆಗಳು ಸಾಗಾಟಕ್ಕೆ ರೂ. 1,500 ಪಡೆಯಲಿದ್ದು, ನಗರ ಪ್ರದೇಶಗಳಲ್ಲಿ ರೂ. 1,000 ಪಡೆಯಲಿವೆ. ಇನ್ನು ಅಸಾಮಾನ್ಯ ಸಂದರ್ಭಗಳಲ್ಲಿ ಇದರ ಸಾಗಾಟಕ್ಕೆ ರೂ. 2000 ದೊರೆಯಲಿದೆ ಎಂದು ಅಧಿಸೂಚನೆ ತಿಳಿಸಿದೆ.
ರಾಜ್ಯದ ಮಹಾಪ್ರಯಾಣ್ ಯೋಜನೆಯ ಮಾರ್ಗಸೂಚಿ ಅಡಿಯಲ್ಲಿ ಜಿಲ್ಲಾಧಿಕಾರಿಗಳು ಗರಿಷ್ಠ ರೂ. 2000 ಘೋಷಿಸಬಹುದು ಎಂದು ಅದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.