ನವದೆಹಲಿ: ಈಶಾನ್ಯ ಭಾರತದ ಕೆಲವು ರಾಜ್ಯಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ವಿಶೇಷ ಪರವಾನಿಗೆ ಅವಧಿಗೆ ಸರ್ಕಾರ ಶೀಘ್ರದಲ್ಲೇ ವಿನಾಯಿತಿ ನೀಡಲಿದೆ.
ಪ್ರವಾಸೋದ್ಯಮ ಇಲಾಖೆ ಈಗಾಗಲೇ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದು, ಪರವಾನಿಗೆಯ ನೋಂದಣಿ ಪ್ರಕ್ರಿಯೆ ಸುಗಮಗೊಳಿಸಲಿದೆ. ಈ ಪರವಾನಿಗೆ ಅವಧಿಯನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ 1 ವರ್ಷ ಅವಧಿಯಿಂದ 2 ವರ್ಷಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಪ್ರಸ್ತುತ ವಿದೇಶಿ ಪ್ರವಾಸಿಗರು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಕೆವಲು ಭಾಗಗಳಿಗೆ ಭೇಟಿ ನೀಡಲು ಸಂರಕ್ಷಿತ ಪ್ರದೇಶ ಪರವಾನಿಗೆಯನ್ನು ಪಡೆಯಬೇಕಿದೆ. ಅರುಣಾಚಲ ಪ್ರದೇಶದಲ್ಲಿ ವಿಧೇಶಿಗರಿಗೆ ವಾಸ್ತವ್ಯದ ಅವಧಿ 30 ದಿನ ಇದ್ದು, ಇದರ ಪರವಾನಿಗೆ ಪಡೆಯಲು ೫೦ ಡಾಲರ್ ಪಾವತಿಸಬೇಕಿದೆ. ಅಲ್ಲದೇ ವಿದೇಶಿಗರ ನೋಂದಣಿ ಕಚೇರಿಯಲ್ಲಿ ನೋಂದಾಯಿಸ ಬೇಕಿದೆ.
ಮಣಿಪುರ, ಮಿಝೋರಾಂ, ನಾಗಾಲ್ಯಾಂಡ್ಗಳಲ್ಲಿ ನಿರ್ಬಂಧಿತ ಪ್ರದೇಶ ಪರವಾನಿಗೆ 2013ರಲ್ಲಿ ವಿನಾಯಿತಿ ನೀಡಲಾಗಿದ್ದು, ಸಿಕ್ಕಿಂನಲ್ಲಿ ಇದು ಈಗಲೂ ಜಾರಿಯಲ್ಲಿದೆ. ಪ್ರವಾಸಿಗರು ತಾವು ವಾಸ್ತವ್ಯ ಹೂಡುವ ಜಿಲ್ಲೆಗಳ ಸ್ಥಳೀಯ ವಿದೇಶಿಗರ ನೋಂದಣಿ ಕಚೇರಿಗಳಲ್ಲಿ ನೋಂದಣಿ ಮಾಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.