ಚಂಡೀಗಢ: ಉರಿ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ಥಾನದ ಬೆಳೆಯುತ್ತಿರುವ ಆತಂಕಗಳ ನಡುವೆ ನವೆಂಬರ್ನಲ್ಲಿ ನಡೆಯಲಿರುವ 6ನೇ ವಿಶ್ವಕಪ್ ಕಬಡ್ಡಿಗೆ ಪಾಕಿಸ್ಥಾನದ ಆಟಗಾರರಿಗೆ ವೀಸಾ ನಿರಾಕರಿಸುವ ಸಾಧ್ಯತೆ ಇದೆ.
ಪಾಕ್ ಜೊತೆ ಯಾವುದೇ ಕಾರಣಕ್ಕೂ ಕ್ರಿಕೆಟ್ ಪಂದ್ಯ ಆಡುವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಈಗಾಗಲೇ ಹೇಳಿದ್ದು, ಉರಿ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನದ ಆಟಗಾರರಿಗೆ ಕೇಂದ್ರ ಸರ್ಕಾರ ವೀಸಾ ನೀಡುವ ಬಗ್ಗೆ ವಿಶ್ವಕಪ್ ಕಬಡ್ಡಿ ಆಯೋಜಕ ಪಂಜಾಬ್ ಕಬಡ್ಡಿ ಅಸೋಸಿಯೇಶನ್ ಸಂಶಯ ವ್ಯಕ್ತಪಡಿಸಿದೆ.
6ನೇ ವಿಶ್ವಕಪ್ ಕಬಡ್ಡಿಗೆ ಪಾಕ್ನ್ನು ಎರಡೂವರೆ ತಿಂಗಳ ಹಿಂದೆ ಆಹ್ವಾನಿಸಲಾಗಿತ್ತು. ಆದರ ಭಯೋತ್ಪಾದಕ ದಾಳಿಯ ಬಳಿಕ ದೇಶದಲ್ಲಿಯ ಪರಿಸ್ಥಿತಿಯಿಂದಾಗಿ ಪಾಕ್ ಆಟಗಾರರಿಗೆ ಭಾರತ ಸರ್ಕಾರ ವೀಸಾಗಳನ್ನು ನೀಡುವುದು ಖಚಿತವಾಗಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಪಂಜಾಬ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿಕಂದರ್ ಸಿಂಗ್ ಮಾಲುಕಾ ಹೇಳಿದ್ದಾರೆ.
ನವೆಂಬರ್ 3ರಿಂದ 17ರ ವರೆಗೆ ನಡೆಯಲಿರುವ 6ನೇ ವಿಶ್ವ ಕಬಡ್ಡಿ ಕಪ್ನ್ನು (ಪುರುಷರು ಮತ್ತು ಮಹಿಳೆಯರು) ಪಂಜಾಬ್ ಆಯೋಜಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.