ಲಂಡನ್: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಏಕೈಕ ಪುತ್ರಿ ಅನಿತಾ ಬೋಸ್ ತಮ್ಮ ತಂದೆಯ ಚಿತಾಭಸ್ಮವನ್ನು ಭಾರತಕ್ಕೆ ಮರಳಿ ತರಲು ಬಯಸಿದ್ದಾರೆ ಎಂದು ಜಪಾನ್ನ ದಿನಪತ್ರಿಕೆ ವರದಿ ಮಾಡಿದೆ.
ನಾನು ಸ್ವತಂತ್ರ ರಾಷ್ಟ್ರವಾದ ಭಾರತಕ್ಕೆ ತಂದೆಯ ಚಿತಾಭಸ್ಮವನ್ನು ತರಲು ಬಯಸುತ್ತೇನೆ. ಆ ಮೂಲಕ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಭಾರತದ ಸ್ವಾತಂತ್ರ್ಯ ಅವರ ಅತ್ಯಂತ ದೊಡ್ಡ ಆಸೆಯಾಗಿತ್ತು ಎಂದು ಅವರು ‘ಯಮುರಿ ಶಿಮ್ಬುನ್’ನಲ್ಲಿ ತಿಳಿಸಿದ್ದಾರೆ.
ನೇತಾಜಿ ಅವರ ಕುರಿತು ಜಪಾನ್ ಸರ್ಕಾರ 1956ರಲ್ಲಿ ನಡೆಸಿದ ತನಿಖೆಯ ವರದಿಯ ಆಧಾರದಲ್ಲಿ ‘ಯಮುರಿ ಶಿಮ್ಬುನ್’ ವರದಿಯನ್ನು ಶುಕ್ರವಾರ ಪ್ರಕಟಿಸಲಾಗುವುದು ಎಂದು Bosefiles.Info ಹೇಳಿದೆ.
Bosefiles.Info ಜಪಾನ್ ಸರ್ಕಾರ 1956ರಲ್ಲಿ ನಡೆಸಿದ ತನಿಖೆಯ ವರದಿಯನ್ನು ಸೆಪ್ಟೆಂಬರ್ 1ರಂದು ಪ್ರಕಟಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.