ನವದೆಹಲಿ: ಆಗ್ನೇಯ ಭಾರತದ ಏಕೈಕ ವಿಜ್ಞಾನ ಪ್ರಯೋಗಾಲಯವಾಗಿರುವ ‘ನಾರ್ಥ್ ಈಸ್ಟ್ ಇನ್ಸ್ಟಿಟ್ಯೂಟ್ ಫಾರ್ ಸೈನ್ಸ್ ಎಂಡ್ ಟೆಕ್ನಾಲಜಿ ( )ಯ ೭೪ನೇ ಸ್ಥಾಪನಾ ದಿನದ ಅಂಗವಾಗಿ ಸೋಮವಾರ ಆಯೋಜಿಸಲಾಗಿದ್ದ ಕಿಶನ್ ಮೇಳ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೋರ್ಹತ್ ರೈತರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಹ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸಿಟ್ರೋನೆಲ್ಲಾ ಮತ್ತು ಲೆಮನ್ ಗ್ರಾಸ್ ಎಂಬ ಎರಡು ಪ್ರಭೇದಗಳ ಸುಗಂಧಯುಕ್ತ ಮತ್ತು ವೈದ್ಯಕೀಯ ಸಸಿಗಳನ್ನು ಅನಾವರಣಗೊಳಿಸಿದರು.
ಕೃಷಿಯಲ್ಲಿ ಯಶಸ್ಸು ಕಂಡ ಇಬ್ಬರು ರೈತರಾದ ಬಿಶ್ವನಾಥ್ ಪಂಡಿತ್ ಹಾಗೂ ಅಕ್ಷಯ್ ಸರ್ಮಾ ಅವರೊಂದಿಗೆ ಪ್ರಧಾನಿ ಮೋದಿ ಅವರು ೧೦ ನಿಮಿಷಗಳ ಕಾಲ ಸಂವಹನ ನಡೆಸಿದರು.
ಬಿಎಸ್ಸಿ (ಸಸ್ಯಶಾಸ್ತ್ರ) ಪದವಿ ಬಳಿಕ ಕೃಷಿಯನ್ನು ಆಯ್ದುಕೊಂಡ ಯುವ ಕೃಷಿಕ ಬಿಶ್ವನಾಥ್ ಪಂಡಿತ್ ಅವರ ಸಾಧನೆಗೆ ಪ್ರಶಂಸಿಸಿದ ಪ್ರಧಾನಿ ಮೋದಿ, ಪಂಡಿತ್ನ ಸಾಧನೆ ದೇಶದ ಸಾವಿರಾರು ಜನರಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.
ಅಸ್ಸಾಂನ ವಿವಿಧ ಜಿಲ್ಲೆಗಳ ಸುಮಾರು 500 ರೈತರು ಕಿಶನ್ ಮೇಳದಲ್ಲಿ ಪಾಲ್ಗೊಂಡಿದ್ದು, ಜೋರ್ಹತ್ನ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಕೆ.ಎಂ. ಬಜರ್ಬರುಹಾ ಕಿಶನ್ ಮೇಳದಲ್ಲಿ ಭಾಗವಹಿಸಿದ ಎಲ್ಲ ರೈತರಿಗೂ ಸಿಟ್ರೋನೆಲ್ಲಾ ಮತ್ತು ಲೆಮನ್ ಗ್ರಾಸ್ ಸಸಿಗಳನ್ನು ವಿತರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.