ಶ್ರೀನಗರ: ಕಾಶ್ಮೀರ ಕಣಿವೆಯ 12,000 ಯುವಕರು ಸೇನಾ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಜುಲೈ ೮ರಂದು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಗಲಭೆ ಮುಂದುವರೆದಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಜುಲೈನಿಂದ ಸೆಪ್ಟೆಂಬರ್ಗೆ ಮುಂಡೂದಲಾಗಿತು.
ಇನ್ನು ದಕ್ಷಿಣ ಕಾಶ್ಮೀರದ ಯುವಕರಿಗೆ ಭಾರತೀಯ ಸೇನೆ ಒಂದು ಆಕರ್ಷಣೆಯಾಗಿ ಮುಂದುವರಿದಿದೆ.
ಸೇನಾ ನೇಮಕಾತಿಗೆ ಕಾಶ್ಮೀರದ 12,000 ಯುವಕರು ಅರ್ಜಿ ಸಲ್ಲಿಸಿದ್ದು, ಈ ಪೈಕಿ ದಕ್ಷಿಣ ಕಾಶ್ಮೀರದ ೫ ಜಿಲ್ಲೆಗಳಿಂದಲೇ ೬,೦೦೦ ಯುವಕರು ಅರ್ಜಿ ಸಲ್ಲಿಸಿದ್ದಾರೆ.
ನಾಲ್ಕು ದಿನಗಳ ಕಾಲ ನಡೆಯಲಿರುವ ನೇಮಕಾತಿ ಪ್ರಕ್ರಿಯೆಯ ಮೊದಲ ದಿನ ೪೨೫ ಮಂದಿ ನೇಮಕಾತಿ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.
ಆರಂಭದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಜುಲೈ ತಿಂಗಳಿಗೆ ನಿಗದಿ ಮಾಡಲಾಗಿತ್ತು, ಆದರೆ ಗಲಬೆ ಮತ್ತಿತರ ಪರಿಸ್ಥಿಗಳಿಂದಾಗಿ ಸೆಪ್ಟೆಂಬರ್ಗೆ ಮುಂದೂಡಲಾಯಿತು. ಸುಮಾರು 425 ಅಭ್ಯರ್ಥಿಗಳು ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿದ್ದು, ಇದನ್ನು ಆಯೋಜಿಸುವುದು ಒಂದು ದೊಡ್ಡ ಸವಾಲಾಗಿದೆ. ಆದರೆ ಸರ್ಕಾರ ಮತ್ತು ಸೇನೆ ಇದರಲ್ಲಿ ತೊಡಗಿರುವುದರಿಂದ ಸಮರ್ಥವಾಗಿ ನಡೆಸಲು ಅನುಕೂಲವಾಗಿದೆ ಎಂದು ಭಾರತೀಯ ಸೇನೆಯ ಉಪ ನಿರ್ದೆಶಕ ಜನರಲ್ ಬ್ರಿಗೇಡಿಯರ್ ಜೆ.ಎಸ್. ಸಮ್ಯಾಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.