ನವದೆಹಲಿ: ಬ್ರಿಟನ್ನಲ್ಲಿರುವ ೧೦೫ ಕ್ಯಾರಟ್ ಕೊಹಿನೂರ್ ಭಾರತದ ಆಸ್ತಿ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಹೇಳಿದೆ.
ಮಹಾರಾಜ ದುಲೀಪ್ ಸಿಂಗ್ನಿಂದ ಕೊಹಿನೂರ್ನ್ನು ಅಂದಿನ ಬ್ರಿಟಿಷ್ ಸರ್ಕಾರ ಒಯ್ದಿದ್ದು, ಇದನ್ನು ರಾಣಿ ವಿಕ್ಟೋರಿಯಾಗೆ ಉಡುಗೊರೆಯಾಗಿ ನೀಡಿರಲಿಲ್ಲ. ಈ ಅಮೂಲ್ಯ ರತ್ನ ಭಾರತದ ಆಸ್ತಿ ಎಂದು ಕೇಂದ್ರ ಹೇಳಿದೆ.
ಕೊಹಿನೂರ್ ರತ್ನ ಭಾರತೀಯರ ಮನಸ್ಸಿನ ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ಯಾವುದೇ ಆಯ್ಕೆಗೆ ಅವಕಾಶ ನೀಡದೇ ಕೊಹಿನೂರ್ ಪಡೆಯಲು ಬ್ರಿಟಿಷ್ ಸರ್ಕಾರದೊಂದಿಗೆ ಎಲ್ಲ ಪ್ರಯತ್ನದೊಂದಿಗೆ ಸಂಧಾನ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.
ಟಿಪ್ಪು ಸುಲ್ತಾನ್, ಬಹಾದುರ್ ಶಾ ಜಫರ್, ಝಾನ್ಸಿ ರಾಣಿ ಅವರಿಗೆ ಸೇರಿದ ಇತರ ವಜ್ರಗಳನ್ನು ಹಿಂದಿರುಗಿಸುವಂತೆ ಭಾರತದ ಬ್ರಿಟಿಷ್ ಹೈಕಮಿಷನರ್ ನಿರ್ದೇಶಿಸುವಂತೆ ಕೋರಿ ಸಂಸ್ಥೆಯೊಂದು ಕೇಸ್ ದಾಖಲಿಸಿದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಗೆ ಈ ಅರ್ಜಿ ಸಲ್ಲಿಸಿದೆ.
ಟಿ.ಎಸ್. ಠಾಕೂರ್ ನೇತೃತ್ವದ ನ್ಯಾಯಪೀಠದ ಈ ಹಿಂದಿನ ವಿಚಾರಣೆ ವೇಳೆ ಕೊಹಿನೂರ್ ಕಳವು ಮಾಡಲಾದವಸ್ತು ಎಂದು ವಿಭಾಗಿಸಲು ಸಾಧ್ಯವಿಲ್ಲ. ಬದಲಿಗೆ ಉಡುಗೋರೆಯಾಗಿ ನೀಡಿದ ವಸ್ತು ಎಂದು ಪರಿಗಣಿಸಬಹುದು. ಕೊಹಿನೂರ್ ಮೇಲೆ ನಮ್ಮ ಹಕ್ಕು ಸಾಧಿಸಲು ಭಾರತ ಪ್ರಯತ್ನಿಸಿದಲ್ಲಿ ಮುಂದೆ ಬೇರೆ ದೇಶಗಳು ಇದನ್ನು ಪಡೆಯಲು ಬೇಡಿಕೆ ಇಡಬಹುದು ಎಂದು ಹೇಳಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.