ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಭೇಟಿ ಮಾಡಿದ್ದು, ಪ್ರಾದೇಶಿಕ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದು, ರಾಜಕೀಯ ಉದ್ದೇಶಕ್ಕಾಗಿ ಬಯೋತ್ಪಾದನೆಯ ಬಳಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ವಿದ್ಯಮಾನ ಶಾಂತಿ, ಪ್ರಗತಿ ಮತ್ತು ಸ್ಥಿರತೆಗೆ ಏಕೈಕ ದೊಡ್ಡ ಆತಂಕವಾಗಿದೆ. ಯಾವುದೇ ರೀತಿಯ ಪಕ್ಷಪಾತವಿಲ್ಲದೇ ಎಲ್ಲ ರೀತಿ ಭಯೋತ್ಪಾದನೆಯನ್ನು ತರಡೆದು ಹಾಕಲು ಕರೆ ನೀಡಿದ ಉಭಯ ನಾಯಕರು, ಭಾರತ, ಅಫ್ಘಾನಿಸ್ಥಾನ ಸೇರಿದಂತೆ ಇತರ ದೇಶಗಳನ್ನು ಗುರಿಯಾಗಿಸುವ ಭಯೋತ್ಪಾದಕರಿಗೆ ಪ್ರಾಯೋಜಕತ್ವ, ವಿನಾಯಿತಿ, ಬೆಂಬಲ, ರಕ್ಷಣೆ ನೀಡುವುದನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ.
ಹೈದರಾಬಾದ್ ಹೌಸ್ನಲ್ಲಿ ಎರಡೂ ನಿಯೋಗಗಳ ಮಾತುಕತೆ ಬಳಿಕ ಪ್ರಧಾನಿ ಮೋದಿ ಅವರು ಶಿಕ್ಷಣ, ಕೃಷಿ, ಕೌಶಲ್ಯ ಅಶಿವೃದ್ಧಿ, ಮಹಿಳೆಯರ ಸಬಲೀಕರಣ, ಆರೋಗ್ಯ, ಶಕ್ತಿ, ಮೂಲಸೌಕರ್ಯ ಮತ್ತು ಪ್ರಜಾಪ್ರಭುತ್ವ ಬಲಪಡಿಸುವುದು ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗೆ ಅಫ್ಘಾನಿಸ್ಥಾನಕ್ಕೆ ಭಾರತ 1 ಬಿಲಿಯನ್ ಡಾಲರ್ ಮೊತ್ತವನ್ನು ನಿಯೋಜಿಸುವುದಾಗಿ ಘೋಷಿಸಿದ್ದಾರೆ.
ಇದೇ ವೇಳೆ ಎರಡೂ ರಾಷ್ಟ್ರಗಳು ಮೂರು ಒಪ್ಪಂದಗಳಾದ ಕೈವರ್ತನ ಒಪ್ಪಂದ, ನಾಗರಿಕ ಮತ್ತು ವಾಣಿಜ್ಯ ಸಹಕಾರ ಹಾಗೂ ಬಾಹ್ಯ ಪ್ರದೇಶಗಳ ಶಾಂತಿಯುತ ಬಳಕೆ ಸಹಕಾರ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.